ಹುಬ್ಬಳ್ಳಿಯ “ಚೆನ್ನಮ್ಮ ವೃತ್ತ”ದಲ್ಲಿ ಬಾನೆತ್ತರಕ್ಕೆ ಚಿಮ್ಮಿದ ನೀರು… “ಕಾಮಗಾರಿ ಕಮಂಗಿತನ”…!!!!

ಹುಬ್ಬಳ್ಳಿ: ವಾಣಿಜ್ಯನಗರಿಯಲ್ಲಿ ನಡೆದಿರುವ ಆಮೆಗತಿಯ ಕಾರ್ಯಗಳಲ್ಲಿ ಅವಘಡಗಳು ಮುಂದುವರೆದಿದ್ದು, ರಾತ್ರಿ ಪ್ರಮುಖ ಪೈಪ್ ಒಡೆದು ಲಕ್ಷಾಂತರ ಲೀಟರ್ ನೀರು ಪೋಲಾದ ಘಟನೆ ಸಂಭವಿಸಿದೆ.
ಚೆನ್ನಮ್ಮ ವೃತ್ತದಲ್ಲಿ ನಡೆದಿರುವ ಕಾಮಗಾರಿಯ ವೇಳೆಯಲ್ಲಿ ನಗರದೊಳಗೆ ನೀರು ನೀಡುವ ಪ್ರಮುಖ ಪೈಪ್ ಒಡೆದ ಪರಿಣಾಮ, ನೀರು ಬಾನೆತ್ತರಕ್ಕೆ ಚಿಮ್ಮಿದೆ. ವೀಡಿಯೋ ಇಲ್ಲಿದೆ ನೋಡಿ…
ರಭಸವಾಗಿ ಮೇಲೆ ಚಿಮ್ಮುತ್ತಿದ್ದ ನೀರು ದಾರಿಹೋಕರಿಗೆ ತೀವ್ರ ಸಮಸ್ಯೆಯನ್ನ ಸೃಷ್ಟಿಸಿತ್ತು. ಸಾರ್ವಜನಿಕರು ರಸ್ತೆಯುದ್ದಕ್ಕೂ ನಿಂತು ಈ ದೃಶ್ಯಗಳನ್ನ ಮೊಬೈಲ್ನಲ್ಲಿ ಸೆರೆ ಹಿಡಿಯುತ್ತಿದ್ದದ್ದು ಕಂಡು ಬಂದಿತು.
ಹುಬ್ಬಳ್ಳಿಗೆ ತಮ್ಮ ಮಾರ್ಟಿನ ಸಿನೇಮಾದ ಪ್ರಚಾರಕ್ಕೆ ದೃವ ಸರ್ಜಾ ಆಗಮಿಸಿದ ಸಮಯದಲ್ಲಿ ಅಭಿಮಾನಿಗಳು ಹೂಮಳೆ ಸುರಿಸಿದರು.
ವೀಡಿಯೋ...