Posts Slider

Karnataka Voice

Latest Kannada News

ಹುಬ್ಬಳ್ಳಿಯ ದುರ್ಗದಬೈಲಿನಲ್ಲಿ ಪೊಲೀಸರಿಂದ ಹಲ್ಲೆ- ಆರೋಪ: ಸಿಸಿಟಿವಿಯಲ್ಲಿ ಕಂಡಿದ್ದೇನು…!

Spread the love

ಹುಬ್ಬಳ್ಳಿ: ನಗರದಲ್ಲಿ ನಡೆದ ಪುಟ್ ಪಾತ್ ಕಾರ್ಯಾಚರಣೆಯ ವೇಳೆಯಲ್ಲಿ ದುರ್ಗದಬೈಲ್ ಪ್ರದೇಶದಲ್ಲಿ ಪೊಲೀಸರು ಹಲ್ಲೆ ಮಾಡಿದ್ದಾರೆಂದು ಆರೋಪಿಸಿ, ಅಂಗಡಿ ಮಾಲೀಕರೊಬ್ಬರು ಚಿಕಿತ್ಸೆಗಾಗಿ ಕಿಮ್ಸಗೆ ದಾಖಲಾದ ಘಟನೆ ನಡೆದಿದೆ.

ವೈರಲ್ ವೀಡಿಯೋ

ವೀರಭದ್ರ ಎಂಬುವವರೇ ಕಿಮ್ಸಗೆ ದಾಖಲಾಗಿದ್ದು, ಘಟನೆಗೆ ಪೊಲೀಸರೇ ಕಾರಣವೆಂದು ಹೇಳಿದ್ದಾರೆ. ಅಂಗಡಿಗಳನ್ನ ಖಾಲಿ ಮಾಡುವಾಗ ಮನವಿ ಮಾಡಿಕೊಂಡೆ. ಆಗ ಅಲ್ಲಿದ್ದವರು ತಮ್ಮ ಮೇಲೆ ಹಲ್ಲೆ ಮಾಡಿದರೆಂದು ದೂರಿದ್ದಾರೆ.

ಘಟನೆಯಲ್ಲಿ ಗಾಯಗಳಾಗಿದೆ ಎಂದು ಕಿಮ್ಸಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಸಂಚಾರಿ ಠಾಣೆಯ ಇನ್ಸಪೆಕ್ಟರೊಬ್ಬರು ಅಸಹ್ಯವಾಗಿ ಮಾತನಾಡಿದ್ದಾರೆಂದು ಗಾಯಾಳು ವೀರಭದ್ರ ಆರೋಪಿಸಿದರು.

ಹುಬ್ಬಳ್ಳಿಯ ದುರ್ಗದಬೈಲಿನಲ್ಲಿ ನಡೆದ ಪುಟ್ ಪಾತ್ ಕಾರ್ಯಾಚರಣೆಯಲ್ಲಿ ಅಂಗಡಿ ಮಾಲೀಕನೋರ್ವನನ್ನ ಪೊಲೀಸರು ಥಳಿಸಿರುವ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗಿವೆ.


Spread the love

Leave a Reply

Your email address will not be published. Required fields are marked *