‘ರಜತ ಸಂಭ್ರಮ” ಸಿನೇಮಾ ಮಾಡದಂತೆ ರಜತ ಉಳ್ಳಾಗಡ್ಡಿಮಠರಿಗೆ ಧಮಕಿ…!?

ಹುಬ್ಬಳ್ಳಿ: ತೀವ್ರ ಕುತೂಹಲ ಕೆರಳಿಸಿರುವ ರಜತ ಸಂಭ್ರಮದ ಪೋಸ್ಟರ್, ಇದೀಗ ಬೇರೆಯದ್ದೆ ಸ್ವರೂಪವನ್ನ ಪಡೆದಿದ್ದು, ಕಾಂಗ್ರೆಸ್ ಮುಖಂಡ ರಜತ ಉಳ್ಳಾಗಡ್ಡಿಮಠ ಅವರಿಗೆ ಬೆದರಿಕೆ ಕರೆ ಬಂದಿದೆ ಎಂದು ಹೇಳಲಾಗಿದೆ.

ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷರಾಗಿರುವ ರಜತ ಉಳ್ಳಾಗಡ್ಡಿಮಠ ‘ರಜತ ಸಂಭ್ರಮ’ದ ಪೋಸ್ಟರ್ ನ್ನ ಹೊರ ಹಾಕಿದ್ದರು. ಅಷ್ಟೇ ಅಲ್ಲ, ಅದು ಚಲನಚಿತ್ರವೆಂದು ಹೇಳಲಾಗಿದ್ದು, ಅದರಲ್ಲಿ ಬಹುತೇಕರ ಪಾತ್ರಗಳು ಬರುತ್ತವೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಸ್ವತಃ ರಜತ ಉಳ್ಳಾಗಡ್ಡಿಮಠ ಅವರಿಗೆ ದೂರವಾಣಿ ಮೂಲಕ ಧಮಕಿ ಹಾಕಿ, ಇದನ್ನ ಸಿನೇಮಾ ಮಾಡಿದರೇ ಸುಮ್ಮನೆ ಇರೋದಿಲ್ಲವೆಂದು ಹೇಳಲಾಗಿದೆ ಎಂದು ಗೊತ್ತಾಗಿದೆ. ಆದರೆ, ಈ ಬಗ್ಗೆ ಪ್ರತಿಕ್ರಿಯೆ ಕೊಡಲು ರಜತ ನಿರಾಕರಿಸಿದ್ದಾರೆ.
ಹುಬ್ಬಳ್ಳಿ ರಾಜಕೀಯ ವಲಯದಲ್ಲಿ ರಜತ ಸಂಭ್ರಮ ಸಾಕಷ್ಟು ಚರ್ಚೆಯನ್ನ ಹುಟ್ಟು ಹಾಕಿದ್ದು, ದಿನೇ ದಿನೇ ಹಲವು ಘಟನಾವಳಿಗಳು ನಡೆಯುತ್ತಿವೆ. ಆದರೆ, ಇಲ್ಲಿಯವರೆಗೆ ರಜತ ಉಳ್ಳಾಗಡ್ಡಿಮಠ ಅವರು ಈ ಬಗ್ಗೆ ಸ್ಪಷ್ಟತೆಯನ್ನ ನೀಡಿಲ್ಲ.