Posts Slider

Karnataka Voice

Latest Kannada News

ಗ್ರಾ.ಪಂ ಚುನಾವಣೆಯಲ್ಲಿ ಸೋಲು: ತನ್ನೂರಿನ ಸ್ಮಶಾನ ರಸ್ತೆಯನ್ನೇ ಬಂದ್ ಮಾಡಿದ ಭೂಪ..!

1 min read
Spread the love

ಕೋಲಾರ: ಇತ್ತೀಚೆಗೆ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ವ್ಯಕ್ತಿಯೋರ್ವ ಸೋತ ಹಿನ್ನೆಲೆಯಲ್ಲಿ ತನ್ನ ಹೊಲದ ಮೂಲಕ ಸ್ಮಶಾನಕ್ಕೆ ಹೋಗುತ್ತಿದ್ದ ರಸ್ತೆಯನ್ನೇ ಜೆಸಿಬಿಯಿಂದ ಅಗೆದು ಬಂದ್ ಮಾಡಿದ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮಂಡಿಕಲ್ ಗ್ರಾಮದಲ್ಲಿ ನಡೆದಿದೆ.

ಮುಳಬಾಗಿಲು ತಾಲೂಕಿನ ಅಗರ ಗ್ರಾಮ ಪಂಚಾಯತಿಗೆ ಒಳಪಡುವ ಮಂಡಿಕಲ್ ಗ್ರಾಮದಿಂದ ಸ್ಪರ್ಧೆ ಮಾಡಿದ್ದ ವೆಂಕಟಾಚಲಪತಿಗೌಡ ಹಾಗೂ ಸಂಬಂಧಿಕರು ಗ್ರಾಮದ ಪ್ರಮುಖ 11 ರಸ್ತೆಗಳನ್ನ ಜೆಸಿಬಿ ಅಗೆದು ಯಾರೂ ಸಂಚರಿಸದಂತೆ ಮಾಡಿದ್ದಾರೆಂದು ಗ್ರಾಮಸ್ಥರು ದೂರು ನೀಡಿದ್ದಾರೆ.

ಮಂಡಿಕಲ್ ಗ್ರಾಮದಲ್ಲಿನ ಹಲವು ರೈತರ ಕೃಷಿ ಜಮೀನು, ಸ್ಮಶಾನ ಕಡೆ ತೆರಳುವ  11 ಮಾರ್ಗಗಳನ್ನ ಬಂದ್ ಮಾಡಿರುವ ಬಗ್ಗೆ ತಹಶಿಲ್ದಾರ್ ರಾಜಶೇಖರ್ ಅವರಿಗೆ ಗ್ರಾಮಸ್ಥರು ನೀಡಿದ್ದು, ಇದಕ್ಕೆಲ್ಲ ಚುನಾವಣೆಯಲ್ಲಿನ ಸೋಲು ಕಾರಣ ಎಂದು ಆರೋಪಿಸಿದ್ದಾರೆ.

ಆರೋಪ ತಳ್ಳಿಹಾಕಿದ ವೆಂಕಟಾಚಲಪತಿಗೌಡ

– ಜೆಸಿಬಿಯಿಂದ ಅಗೆದಿರುವ ಸ್ಥಳ ಜನರು ಓಡಾಡುವ ದಾರಿಯಲ್ಲ, ಅದು ನನ್ನ ಸ್ವಂತ ಸ್ತಳ

– ನನ್ನ ಬಳಿ ದಾಖಲೆಯಿದೆ ನಾಳೆ ಅಧಿಕಾರಿಗಳು ಸ್ಥಳಕ್ಕೆ ಬಂದಾಗ ನೀಡುವೆ

– ಚುನಾವಣೆ ಸೋಲಿಗು, ರಸ್ತೆ ಅಗೆದಿರುವ ವಿಚಾರಕ್ಕು ಸಂಬಂಧವಿಲ್ಲ


Spread the love

Leave a Reply

Your email address will not be published. Required fields are marked *