Karnataka Voice

Latest Kannada News

ಕಮೀಷನರ್ ಕಚೇರಿ ಮುಂದೆ ಅಪಘಾತ: PSI ಎಸ್.ಎ.ಗೌರಿಮಠ ಅವರಿಗೆ ಗಂಭೀರ ಗಾಯ…

ಹುಬ್ಬಳ್ಳಿ: ನಾಳೆ ಸೇವೆಯಿಂದ ನಿವೃತ್ತಿಯಾಗಬೇಕಿದ್ದ ಪೊಲೀಸ್ ಅಧಿಕಾರಿಯೊಬ್ಬರಿಗೆ ವಿಧಿ ಕ್ರೂರ ಆಟವಾಡಿದ್ದು, ಆಮಂತ್ರಣ ಪತ್ರಿಕೆ ಹಂಚಿ ವಾಪಸ್ ಬರುವಾಗ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ.

​ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಕಚೇರಿಯ ಎಎಸ್‌ಐ ಸಣ್ಣವೀರಯ್ಯ ಗೌರಿಮಠ (ಸ್ವಾಮಿಗಳು) ಅವರೇ ಅಪಘಾತಕ್ಕೀಡಾದ ದುರ್ದೈವಿ. 1993ರ ಬ್ಯಾಚ್‌ನ ದಕ್ಷ ಅಧಿಕಾರಿಯಾಗಿರುವ ಇವರು ಮೂಲತಃ ಗಜೇಂದ್ರಗಡದವರು. ಇಲಾಖೆಯಲ್ಲಿ ಇವರನ್ನು ಎಲ್ಲರೂ ಪ್ರೀತಿಯಿಂದ ‘ಸ್ವಾಮಿಗಳು’ ಎಂದೇ ಕರೆಯುತ್ತಿದ್ದರು.

​ನಾಳೆ (ಶನಿವಾರ) ತಮ್ಮ ನಿವೃತ್ತಿ ಕಾರ್ಯಕ್ರಮವಿದ್ದ ಹಿನ್ನೆಲೆಯಲ್ಲಿ, ಕಮೀಷನರ್ ಕಚೇರಿಗೆ ಬಂದು ಅಧಿಕಾರಿ ಹಾಗೂ ಸಿಬ್ಬಂದಿಗೆ ಆಮಂತ್ರಣ ಪತ್ರಿಕೆ ನೀಡಿ ತಮ್ಮ ಬೈಕ್‌ನಲ್ಲಿ ಮರಳಿ ಮನೆಗೆ ಹೊರಟಿದ್ದರು. ಈ ವೇಳೆ ಕಮೀಷನರ್ ಕಚೇರಿ ಮುಂದೆಯೇ ವೇಗವಾಗಿ ಬಂದ ಕಾರೊಂದು ಬೈಕಿಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ರಸ್ತೆಗೆ ಬಿದ್ದು ತೀವ್ರವಾಗಿ ಗಾಯಗೊಂಡಿರುವ ಗೌರಿಮಠ ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ (ICU) ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Leave a Reply

Your email address will not be published. Required fields are marked *