Posts Slider

Karnataka Voice

Latest Kannada News

ತಂದೆ ‘ಅಸ್ತಿ’ ಬಿಡಲು ಬಂದ ಮಗ ನೀರುಪಾಲು- ದುರ್ವಿಧಿಯ ಲೀಲೆ

1 min read
Spread the love

ಬಾಗಲಕೋಟೆ: ತಂದೆಯ ಅಸ್ತಿಯನ್ನ ನದಿಯಲ್ಲಿ ವಿಸರ್ಜಿಸಲು ಬಂದ ಮಗನೂ ನೀರುಪಾಲಾದ ಹೃದಯ ವಿದ್ರಾವಕ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಚೊಳಚಗುಡ್ಡ ಗ್ರಾಮದಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನ ಗದಗ ಜಿಲ್ಲೆಯ ಗಜೇಂದ್ರಗಡದ ನಿವಾಸಿ  ಮಹಾಂತೇಶ ಭೀಮಣ್ಣ ಯಾದವ್  ಎಂದು ಗುರ್ತಿಸಲಾಗಿದೆ. ಮೃತ ವ್ಯಕ್ತಿ ಮಹಾಂತೇಶ ತನ್ನ ಸಹೋದರರ ಜೊತೆಗೆ ಚೊಳಚಗುಡ್ಡ ಗ್ರಾಮದ ಸಮೀಪ ಮಲಪ್ರಭೆ ನದಿಯಲ್ಲಿ ಅಸ್ತಿ ವಿಸರ್ಜಿಸುವುದಕ್ಕೆ ಬಂದಿದ್ದ, ನದಿ ಆಳದಲ್ಲಿ ಮುಳುಗಿ ವಿಸರ್ಜಿಸಲು ಹೋಗಿ ಅನಾಹುತ ಸಂಭವಿಸಿದೆ ಎನ್ನಲಾಗಿದೆ.

ಬಾದಾಮಿ ಅಗ್ನಿಶ್ಯಾಮಕ ದಳದ ಜಿಲ್ಲಾಮಟ್ಟದ ಅಧಿಕಾರಿ ಮಲ್ಲಿಕಾರ್ಜುನ ಅವರ ನೇತರತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಬಳಿಕ ನಾಗರಾಳ ಎಸ್.ಪಿ. ಗ್ರಾಮದ ಬಳಿ ಮೃತ ವ್ಯಕ್ತಿಯ ಶವ ಪತ್ತೆಯಾಗಿದೆ.

ತಂದೆಯ ಸಾವಿನ ನೋವಿನಲ್ಲಿ ಅಸ್ತಿಯನ್ನ ಬಿಡಲು ಬಂದ ಮಗನೂ ಹೀಗೆ ತೀರಿಕೊಂಡ ಘಟನೆ ಕುಟುಂಬದವರಲ್ಲಿ ಮತ್ತಷ್ಟು ನೋವನ್ನ ಹೆಚ್ಚಿಸಿದೆ. ಪ್ರಕರಣ ದಾಖಲು ಮಾಡಿಕೊಂಡಿರುವ ಬದಾಮಿ ಠಾಣೆ ಪೊಲೀಸರು ಮತ್ತಷ್ಟು ಮಾಹಿತಿ ಕಲೆ ಹಾಕುತ್ತಿದ್ದಾರೆ.


Spread the love

Leave a Reply

Your email address will not be published. Required fields are marked *