Posts Slider

Karnataka Voice

Latest Kannada News

ಮೂರು ದಿನದಲ್ಲಿ ಫಲಿತಾಂಶ: ಇಂದು ಗ್ರಾ.ಪಂ ಅಭ್ಯರ್ಥಿ ಸಾವು

1 min read
Spread the love

ಬೆಳಗಾವಿ: ಗ್ರಾಮ ಪಂಚಾಯತಿ ಚುನಾವಣೆಯನ್ನ ಸಮರ್ಥವಾಗಿ ಎದುರಿಸಿ ಇನ್ನೇನು ಮೂರೇ ದಿನದಲ್ಲಿ ಫಲಿತಾಂಶ ಬರತ್ತೆ ಮತ್ತೂ ತಮ್ಮ ಗೆಲುವು ನಿಶ್ಚಿತ ಎಂದುಕೊಂಡಿದ್ದ ಅಭ್ಯರ್ಥಿಯೋರ್ವರು ಇಂದು ಬೆಳಗಿನ ಜಾವ ನಿಧನರಾಗಿದ್ದಾರೆ.

ಖಾನಾಪುರ ತಾಲೂಕಿನ ಹಿರಿಯ ರಾಜಕಾರಣಿ ಹಾಗೂ ನ್ಯಾಯವಾದಿ ಸಿ.ಬಿ. ಅಂಬೋಜಿ ನಸುಕಿನಲ್ಲಿ ನಿಧನರಾದರು. ಅವರಿಗೆ 64 ವರ್ಷ ವಯಸ್ಸಾಗಿತ್ತು. ಕಳೆದ ೧೪ವರ್ಷದಿಂದ ಶ್ರೀ ಬಿಷ್ಟಾದೇವಿ ಜೀರ್ಣೊದ್ದಾರ ಟ್ರಸ್ಟ್ ಅಧ್ಯಕ್ಷರಾಗಿದ್ದರು. ಕಕ್ಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಹಾಗೂ ಕಕ್ಕೇರಿ ಗ್ರಾಪಂ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.

ಜೊತೆಗೆ ಮಂಗಳವಾರದಂದು ನಡೆದ ಗ್ರಾಪಂ ಚುನಾವಣೆಯಲ್ಲಿ ಕಕ್ಕೇರಿ ಗ್ರಾಮದಿಂದ ಸ್ಪರ್ಧೆ ಮಾಡಿದ್ದರು. ಮೃತರಿಗೆ  ಪತ್ನಿ, ಪುತ್ರ, ಪುತ್ರಿ ಇದ್ದಾರೆ. ಚುನಾವಣೆಯಲ್ಲಿ ಸಾಕಷ್ಟು ಹುಮ್ಮಸ್ಸಿನಿಂದ ಪ್ರಚಾರ ಮಾಡಿದ್ದರು. ತಮ್ಮದೇ ರೀತಿಯಲ್ಲಿ ಜನರೊಂದಿಗೆ ಸಂಪರ್ಕ ಹೊಂದಿದ್ದ ಅಂಬೋಜಿಯವರ ನಿಧನ ಗ್ರಾಮದಲ್ಲಿ ನಿರವಮೌನ ಮೂಡಿಸಿದೆ.


Spread the love

Leave a Reply

Your email address will not be published. Required fields are marked *