Posts Slider

Karnataka Voice

Latest Kannada News

ಶಿವಮೊಗ್ಗ, ಚಿಕ್ಕಮಗಳೂರಲ್ಲಿ ಭೂಕಂಪ: ದಿಕ್ಕಾಪಾಲಾದ ಜನ

1 min read
Spread the love

ಚಿಕ್ಕಮಗಳೂರು/ಶಿವಮೊಗ್ಗ: ಎರಡು ಜಿಲ್ಲೆಯಾಧ್ಯಂತ ಭೂಕಂಪದ ಅನುಭವ ಉಂಟಾಗಿದೆ. ಮನೆಯಲ್ಲಿದ್ದ ಸಾಮಾನುಗಳೆಲ್ಲ ಕೆಳಗೆ ಬಿದ್ದ ಪರಿಣಾಮ, ಮನೆಯಿಂದ ಹೊರ ಓಡಿ ಬಂದು ಜನರು ದಿಕ್ಕಾಪಾಲಾಗುವ ಘಟನೆ ನಡೆದಿದೆ.

ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದ ಅನುಭವ ಆಗಿದೆ. ಇದರಿಂದ ಮನೆ ಬಿಟ್ಟು ಹೊರ ಬಂದ ಜನತೆ ಆತಂಕದಲ್ಲಿ ಇದ್ದಾರೆ. ಚಿಕ್ಕಮಗಳೂರಿನ ಹಲವೆಡೆ ಭೂಮಿ ಕಂಪಿಸಿದ್ದು, ಜಿಲ್ಲೆಯ ಎನ್.ಆರ್.ಪುರ, ಕೊಪ್ಪ ಭಾಗದಲ್ಲಿ ಜನರಿಗೆ ಈ ಅನುಭವ ಆಗಿದೆ. 10.21 ರ ಸುಮಾರಿಗೆ ಭಾರೀ ಶಬ್ದದ ಅನುಭವವಾಗಿದ್ದು ಜನರು ಮನೆಯಿಂದ ಹೊರ ಓಡಿ ಬಂದಿದ್ದಾರೆ.

ಶಿವಮೊಗ್ಗದ ತೀರ್ಥಹಳ್ಳಿ, ಹೊಸನಗರ, ಸಾಗರ, ಭದ್ರಾವತಿಯಲ್ಲಿ ಕೂಡ ಭೂಕಂಪದ ಅನುಭವ ಆಗಿದೆ. ಭಾರೀ ಶಬ್ದದೊಂದಿಗೆ ಭೂಮಿ 5, 6 ಸೆಕೆಂಡ್ ಗಳ ಕಾಲ ನಡುಗಿದ ಅನುಭವ ಆಗಿದೆ. ಇದರಿಂದ ಜನರು ಮನೆಯಿಂದ ಹೊರ ಓಡಿ ಬಂದಿದ್ದಾರೆ.

ಎರಡು ಜಿಲ್ಲೆಗಳಲ್ಲಿ ಜನರು ರಾತ್ರಿ ಊಟ ಮಾಡಿ ಮಲಗುವ ಸಮಯದಲ್ಲಿ ಇಂತಹ ಘಟನೆ ನಡೆದಿದ್ದರಿಂದ ಮನೆಯೊಳಗೆ ಯಾರೂ ಹೋಗದೇ ರಸ್ತೆಯಲ್ಲಿ ಸಮಯ ಕಳೆಯುವಂತಾಗಿದೆ.


Spread the love

Leave a Reply

Your email address will not be published. Required fields are marked *