Posts Slider

Karnataka Voice

Latest Kannada News

ತಿಳುವಳಿಕೆ ನೀಡಿದ ಸಂಚಾರಿ ಠಾಣೆ ಪೊಲೀಸರಿಗೆ ಸತ್ಕಾರ..!

1 min read
Spread the love

ಧಾರವಾಡ: ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ವಿಶೇಷ ಕಾರ್ಯಕ್ರಮದ ಮೂಲಕ ಸಂಚಾರ ನಿಯಮಗಳನ್ನ ಪ್ರತಿಯೊಬ್ಬರಿಗೂ ತಿಳಿಸುವ ಪ್ರಯತ್ನಕ್ಕೆ ಧಾರವಾಡ ಸಂಚಾರಿ ಠಾಣೆಯ ಪೊಲೀಸರು ಮುಂದಾಗಿದ್ದು, ಇಂತಹ ಉತ್ತಮ ಕಾರ್ಯನಿರ್ವಹಿಸಿದ ಪೊಲೀಸರನ್ನ ಮಹಾವಿದ್ಯಾಲಯದ ವತಿಯಿಂದ ಸತ್ಕರಿಸಲಾಯಿತು.

ಧಾರವಾಡ ತಾಲೂಕಿನ ರಾಯಾಪೂರ ಬಳಿಯಲ್ಲಿರುವ ಶ್ರೀ ಜಗದ್ಗುರು ಮೃತ್ಯುಂಜಯ ಮಹಾಂತ ಮಹಾವಿದ್ಯಾಲಯದಲ್ಲಿಂದು ಧಾರವಾಡ ಸಂಚಾರಿ ಠಾಣೆ ಪೊಲೀಸರಿಂದ ವಿಶೇಷ ತಿಳುವಳಿಕೆ ಕಾರ್ಯಕ್ರಮವನ್ನ ಆಯೋಜನೆ ಮಾಡಲಾಗಿತ್ತು.

ಎಎಸ್ಐ ಎಂ.ಎಸ್.ಕರಗಣ್ಣನವರ, ಉಪನ್ಯಾಸಕರನ್ನ ಉದ್ದೇಶಿಸಿ ಮಾತನಾಡಿದರು. ರಸ್ತೆಯಲ್ಲಿ ಸಂಚರಿಸುವಾಗ ಜವಾಬ್ದಾರಿಯನ್ನ ಹೊಂದಿರಬೇಕೆಂದು ನಿಮ್ಮ ಮೂಲಕ ವಿದ್ಯಾರ್ಥಿಗಳಿಗೆ ಮನದಟ್ಟು ಆಗುವಂತೆ ಹೇಳಿ ಎಂದು ವಿನಂತಿಸಿದರು.

ಇದೇ ಸಮಯದಲ್ಲಿ ಮುಖ್ಯಪೇದೆ ಮಂಜುನಾಥ ಗದ್ದಿಕೇರಿ, ಪೇದೆಗಳಾದ ಬಸು ಲಮಾಣಿ ಮತ್ತು ಕುಂಬಾರ ಅವರನ್ನ ಕಾಲೇಜಿನ ವತಿಯಿಂದ ಸತ್ಕರಿಸಲಾಯಿತು.


Spread the love

Leave a Reply

Your email address will not be published. Required fields are marked *