Posts Slider

Karnataka Voice

Latest Kannada News

ಧಾರವಾಡ ಜಿಲ್ಲೆಯ “ಗೌರವ ಹೆಚ್ಚಿಸಿದ” ಆಯುಕ್ತ ಈಶ್ವರ ಉಳ್ಳಾಗಡ್ಡಿ- ಧಾರವಾಡ ಜಿಲ್ಲೆಯ SSLC ಫಲಿತಾಂಶ 95.58%…

Spread the love

ಧಾರವಾಡ: ಕೊನೆಗೂ ಧಾರವಾಡ ಜಿಲ್ಲೆಯ ಶಿಕ್ಷಣ ಇಲಾಖೆಯ ಗೌರವ ಹೆಚ್ಚಾಗಿದ್ದು, ಹಲವು ವರ್ಷಗಳಿಂದ ಹಿಂದೆ ಉಳಿದಿದ್ದ ಎಸ್‌ಎಸ್‌ಎಲ್‌ಸಿ ಫಲಿತಾಂಶ ಈ ಬಾರಿ ಮೇಲಕ್ಕೇರಿದೆ.

ಹೌದು.. ಧಾರವಾಡ ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಒಟ್ಟು ಫಲಿತಾಂಶ ಶೇಕಡಾ 95.58 ಆಗಿದ್ದು, ರಾಜ್ಯದಲ್ಲಿ 12ನೇ ಸ್ಥಾನಕ್ಕೇರಿದೆ. ಇದಕ್ಕೆ ನಿಜವಾದ ಕಾರಣಿಕರ್ತರಾಗಿದ್ದು ಶಿಕ್ಷಣ ಇಲಾಖೆಯ ಅಪರ್ ಆಯುಕ್ತರಾದ ಈಶ್ವರ ಉಳ್ಳಾಗಡ್ಡಿ.

ಆಯುಕ್ತ ಈಶ್ವರ ಉಳ್ಳಾಗಡ್ಡಿ ಅವರು ನಿರಂತರವಾಗಿ ಸರಕಾರದ 39 ಅಂಶವನ್ನ ಜಾರಿ ಮಾಡಲು ಸತತ ಪ್ರಯತ್ನ ಮಾಡಿದ್ದರು. ಕಳೆದ ಮೂರು ವರ್ಷದಿಂದ ಡಿಡಿಪಿಐ ಎಸ್.ಎಸ್.ಕೆಳದಿಮಠ ಅವರಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ ಎಂಬುದನ್ನ ಅರಿತು ಸ್ವತಃ ತಾವೇ ಫೀಲ್ಡಿಗೆ ಇಳಿದಿದ್ದರು.

ಈಗ ಈಶ್ವರ ಉಳ್ಳಾಗಡ್ಡಿ ಅವರ ಪ್ರಯತ್ನ ಫಲ ನೀಡಿದೆ. ಧಾರವಾಡದ ಹಿರಿಮೆ ಹೆಚ್ಚಾಗಿದ್ದು, ಇಂತಹ ಅಧಿಕಾರಿಗಳ ಅವಶ್ಯಕತೆ ಧಾರವಾಡಕ್ಕಿದೆ.


Spread the love

Leave a Reply

Your email address will not be published. Required fields are marked *

You may have missed