Karnataka Voice

Latest Kannada News

ಧಾರವಾಡ ಸುಭಾಸ ರಸ್ತೆಯಲ್ಲಿ ರೌಡಿಸಂ: ಕಣ್ಣು ಮುಚ್ಚಿ ಕುಳಿತ್ತಿದ್ದಾರಾ ಪೊಲೀಸರು…

*ಧಾರವಾಡದ ನಡು ರಸ್ತೆಯಲ್ಲೇ ಇದೆಂತಾ ರೌಡಿಸಂ*

ಧಾರವಾಡ: ಮದ್ಯಪಾನ ಮಾಡಿದ್ದ ಯುವಕರ ಗುಂಪೊಂದು ನಡು ರಸ್ತೆಯಲ್ಲೇ ಮಾರಾಮಾರಿ ನಡೆಸಿ ಯುವಕನೋರ್ವನನನ್ನು ಥಳಿಸಿರುವ ಘಟನೆ ಧಾರವಾಡದ ಸುಭಾಷ ರಸ್ತೆಯಲ್ಲಿ ನಿನ್ನೆ ತಡರಾತ್ರಿ ನಡೆದಿದೆ.

ಮಾರಾಮಾರಿ ನಡೆಸಿದ ಯುವಕರ ಹೆಸರು ತಿಳಿದುಬಂದಿಲ್ಲ. ಮದ್ಯಪಾನ ಮಾಡಿದ್ದ ಇವರು ಕ್ಷುಲ್ಲಕ ಕಾರಣಕ್ಕಾಗಿ ಜಗಳ ತೆಗೆದಿದ್ದಾರೆ. ಓರ್ವ ಯುವಕನನ್ನು ಹಿಡಿದು ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಓರ್ವ ವ್ಯಕ್ತಿ ಕೈಯಲ್ಲಿ ಕಬ್ಬಿಣದ ವಸ್ತು ಹಿಡಿದು ಆ ಯುವಕನ ಮೇಲೆ ಹಲ್ಲೆ ನಡೆಸುತ್ತಿದ್ದ ದೃಶ್ಯ ಸೆರೆಯಾಗಿದೆ.

https://fb.watch/ilRlIGkt_9/

https://fb.watch/ilRlIGkt_9/

ಹಲ್ಲೆಗೊಳಗಾದ ಯುವಕನಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಎಂಎಲ್‌ಸಿ ಕೂಡ ಮಾಡಿಸಲಾಗಿದೆ. ಧಾರವಾಡದ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಈ ಸಂಬಂಧ ದೂರು ದಾಖಲಿಸದೇ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.

Leave a Reply

Your email address will not be published. Required fields are marked *