Posts Slider

Karnataka Voice

Latest Kannada News

ಧಾರವಾಡದಲ್ಲಿ “ಒಂದು ಪೋಟೊ ಕಥೆ”- ಕಾಂಗ್ರೆಸ್ ಮುಖಂಡರ ರಾತ್ರಿ ಕಚ್ಚಾಟ…

Spread the love

ಧಾರವಾಡ: ನಗರದಲ್ಲಿ ನಡೆದ ಕಾರ್ಯಕ್ರಮವೊಂದರ ಬ್ಯಾನರ್ ನಲ್ಲಿ ಪೋಟೋ ಹಾಕಿಸುವುದು ಮತ್ತೂ ಹಾಕಿಸದೇ ಇರುವ ಬಗ್ಗೆ ನಾಲ್ವರು ಮನಸೋ ಇಚ್ಚೆ ಬೈದಾಡಿಕೊಂಡು ಹೊಡೆಯಲು ಮನೆಯೊಂದಕ್ಕೆ ನುಗ್ಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಸ್ವಯಂ ಘೋಷಿತ ಅಲ್ಪಸಂಖ್ಯಾತರ ನಾಯಕನೋರ್ವ ತನ್ನ ಅಸಹ್ಯವಾದ ಮಾತಿನಿಂದಲೇ ಖ್ಯಾತಿ ಪಡೆದಿದ್ದು, ಮೂರು ದಿನಗಳ ಹಿಂದೆಯೂ ಮಾತನಾಡಿರೋ ಆಡಿಯೋ ವೈರಲ್ ಆಗುತ್ತಿದೆ.

ಅಸಲಿ ಕಥೆ: ಯುವ ಕಾಂಗ್ರೆಸ್ ನ ನಾಯಕನೋರ್ವನಿಗೆ ಪಾಲಿಕೆಯ ಸದಸ್ಯೆಯ ಮಗನೋರ್ವ ಕಾಲ್ ಮಾಡಿ ಅಸಹ್ಯವಾಗಿ ಮಾತನಾಡಲು ಆರಂಭಿಸುತ್ತಾನೆ. ಅದಕ್ಕೆ ಕಾರಣವಾಗಿದ್ದು ಸ್ವಯಂ ಘೋಷಿತ ನಾಯಕನ ಉಪಟಳ. ಕಾರ್ಯಕ್ರಮಕ್ಕೆ 20 ಸಾವಿರ ದೇಣಿಗೆ ಕೊಟ್ಟು, ಯಾವುದೇ ಉಸಾಬರಿ ಬೇಡವೆಂದು ಕೂತಿದ್ದ ಪಾಲಿಕೆ ಸದಸ್ಯೆಯ ಮಗನಿಗೆ ಸುಖಾಸುಮ್ಮನೆ ‘ಕ್ಯಾಬೇ, ಮೇರೆ ಪೋಟೋ ದಾಲೋ ಮತ್, ಬೋಲ್ಕೆ ಪೈಸೆ ದಿಯಾಕತ್ತೇತೋರೆ’ ಎಂದು ಕಿರಿಕಿರಿ ಉಂಟು ಮಾಡಲಾಗತ್ತೆ.

ಇದನ್ನ ತಾನೂ ಮಾಡಿಲ್ಲವೆಂದು ಸಾಬೀತು ಪಡಿಸಲು ಪ್ರತಿವರ್ಷ 18 ಲಕ್ಷ ರೂಪಾಯಿ ಟ್ಯಾಕ್ಸ್ ಕಟ್ತೇನಿ ಎನ್ನುವ ಆಸಾಮಿ, ಅಷ್ಟೇ ಅಸಹ್ಯವಾಗಿ ಯುವ ಕಾಂಗ್ರೆಸ್ ಚುನಾಯಿತ ನಾಯಕನಿಗೆ ಬೈದಾಡುತ್ತಾನೆ. ಯುವ ಕಾಂಗ್ರೆಸ್ ನಾಯಕ, ತನಗೆ ಪರಿಚಯದ ಮತ್ತೊಬ್ಬನಿಗೆ ಕಾಲ್ ಮಾಡ್ತಾನೆ. ಆತ ಲಕ್ಷಾಂತರ ಟ್ಯಾಕ್ಸ್ ತುಂಬುವ ಶ್ರೀಮಂತನಿಗೆ ಕಾಲ್ ಮಾಡ್ತಾನೆ. ಅಲ್ಲಿಂದ ಶುರುವಾಗೋದು ಹೊಸ ಡ್ರಾಮಾ.

ಪಾಲಿಕೆ ಸದಸ್ಯೆಯ ಮಗ, ಶ್ರೀಮಂತ ಟ್ಯಾಕ್ಸ್ ತುಂಬುವ ವ್ಯಕ್ತಿ, ಸ್ವಯಂ ಘೋಷಿತ ಮುಖಂಡನೊಡಗೂಡಿ ತನಗೆ ಪೋನ್ ಮಾಡಿದವನ ಮನೆಗೆ ಹೊಡೆಯಲು ನುಗ್ತಾರೆ. ಆದರೆ, ಅಷ್ಟರಲ್ಲಿ ಪೊಲೀಸರ ಎಂಟ್ರಿಯಾಗತ್ತೆ. ಈ ಘಟನೆಯಿಂದ ಸತ್ಯ ಹೊರಗೆ ಬರಬೇಕಿದೆ.

ಮಾಜಿ ಸಚಿವರೊಬ್ಬರ ಪೋಟೊ ಹಾಕಿದ್ದರ ಹಿಂದೆ ನಡೆದ ಮತ್ತೂ ನಡೆಯುತ್ತಿರುವ ಡ್ರಾಮಾಗಳಲ್ಲಿ ಅಸಲಿ ಪಿನ್ ಗಳು ಯಾರೂ ಎಂಬುದು ಗೊತ್ತಾಗಬೇಕಿದೆ. ಕಾಂಗ್ರೆಸ್ ಅದೇಲ್ಲೋ ಕುಳಿತು ಪಕ್ಷವನ್ನ ಸಂಘಟನೆ ಮಾಡಲು ಹೊರಟಿದೆ. ಇಲ್ಲಿ ಒಂದೊಂದು ಪೋಟೋಗಾಗಿ ಸ್ವಯಂ ಘೋಷಿತ ನಾಯಕರೆಲ್ಲ, ಬೀದಿ ಕಾಳಗ ನಡೆಸುತ್ತಿದ್ದಾರೆ. ಪೊಲೀಸ್ ಇಲಾಖೆ ಇಂತವರನ್ನ ಚೂರು ಗಮನಿಸಬೇಕಿದೆ, ಏಕೆಂದರೆ, ಮನೆಗೆ ನುಗ್ಗಿ ಹೊಡೆಯುವ ‘ದಾದಾಗಿರಿ’ ನಿಲ್ಲಬೇಕಿದೆ.


Spread the love

Leave a Reply

Your email address will not be published. Required fields are marked *