Posts Slider

Karnataka Voice

Latest Kannada News

ಧಾರವಾಡದ ಕೆಲಗೇರಿಯಂಗಳದಲ್ಲಿ ಸಚಿವ ಸಂತೋಷ ಲಾಡ್ ಮಾಡಿದ್ದೇನು… ತವನಪ್ಪ ಅಷ್ಟಗಿ ಪ್ರತ್ಯಕ್ಷ…!!!

1 min read
Spread the love

ಕೆಲಗೇರಿ ಕೆರೆಯ ದಂಡೆಯಲ್ಲಿ ಸಚಿವ ಸಂತೋಷ ಲಾಡ ಅವರು ಮಿಂಚಿನ ಸಂಚಾರ ಮಾಡಿದ್ರು. ಕಾಂಗ್ರೆಸ್ ಮುಖಂಡ ತವನಪ್ಪ ಅಷ್ಟಗಿ ಮೊದಲ ಬಾರಿಗೆ ಕಾಣಿಸಿಕೊಂಡರು. ಅಷ್ಟಕ್ಕೂ ಅಲ್ಲಿ ಏನು ನಡೀತು ಗೊತ್ತಾ…

ವೀಡಿಯೋ ಇಲ್ಲಿದೆ ನೋಡಿ..

ಧಾರವಾಡ: ಕಳೆದ ಹತ್ತು ವರ್ಷಗಳಲ್ಲಿ ದೇಶದ ಸಾಲ 168.72 ಲಕ್ಷ ಕೋಟಿ ಆಗಿದೆ. ಭಾರತೀಯ ರೂಪಾಯಿ ಶೇ 41.37 ರಷ್ಟು ಕುಸಿದಿದೆ. ಇದಕ್ಕೆಲ್ಲ ಯಾರು ಹೊಣೆ.

ಇಂತಹ ಹಲವಾರು ವಿಷಯಗಳನ್ನು ಒಳಗೊಂಡ ಫ್ಲೆಕ್ಸ್‌ಗಳನ್ನು ಹಿಡಿದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌ ಲಾಡ್‌ ಅವರು, ಇಂದು ಕಳಗೇರಿಯ ಬೀದಿಗಳಲ್ಲಿ ಜನರನ್ನು ಮಾತನಾಡಿಸಿ ಜಾಗೃತಿ ಮೂಡಿಸಿದರು.

ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿನೋದ್‌ ಅಸೂಟಿ ಅವರ ಪರವಾಗಿ ವಿನೂತನವಾಗಿ ಈ ಹಿಂದೆಯೂ ಲಾಡ್‌ ಅವರು ಪ್ರಚಾರ ನಡೆಸಿದರು.

ದೇಶದ ಜನರಿಗೆ ಕಳೆದ ಹತ್ತು ವರ್ಷಗಳಲ್ಲಿ ಸಾಲ ಎಷ್ಟು ಹೆಚ್ಚಳವಾಗಿದೆ. ಚಿನ್ನದ ಬೆಲೆ ಎಷ್ಟು ಏರಿಕೆಯಾಗಿದೆ. ಅಗತ್ಯ ವಸ್ತು, ತೈಲ ಬೆಲೆ ಎಷ್ಟು ಆಗಿದೆ ಎಂಬುದರ ಅರಿವು ಇರಬೇಕು. ಈ ಹತ್ತು ವರ್ಷದಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಬೆಲೆ ಇಳಿಕೆಗೆ, ರೂಪಾಯಿ ಮೌಲ್ಯವರ್ಧನೆಗೆ ಏನೂ ಮಾಡಲಿಲ್ಲ. ಹೋಗಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಈ ಹತ್ತು ವರ್ಷಗಳಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರ ನೀಡಲಿಲ್ಲ. ಇದಕ್ಕೆಲ್ಲ ಯಾರು ಹೊಣೆ ಎಂಬ ಪ್ರಶ್ನೆಗಳನ್ನು ಇಟ್ಟುಕೊಂಡು ಪ್ರಚಾರ ನಡೆಸಿದರು.

ಇವು ದೇಶದ ವಾಸ್ತವ ಪರಿಸ್ಥಿತಿ, ಆದರೆ ಮಾಧ್ಯಮಗಳಲ್ಲಿ ಇವುಗಳ ಬಗ್ಗೆ ಯಾವುದೇ ಚರ್ಚೆ ನಡೆಯುವುದಿಲ್ಲ. ಹಿಂದೂ ಮುಸ್ಲಿಂ ವಿಷಯಗಳೇ ಚರ್ಚೆಗೆ ಬರುತ್ತಿವೆ. ಈ ಬಗ್ಗೆ ಜನರೇ ಅರಿವು ಹೊಂದಬೇಕು. ಬಿಜೆಪಿಯನ್ನು ತಿರಸ್ಕರಿಸಿ. ಕಾಂಗ್ರೆಸ್‌ ಯಾಕೆ ಬೇಕು ಎಂಬುದನ್ನು ಜನರೇ ತೀರ್ಮಾನಿಸಬೇಕು ಎಂದು ಮನವಿ ಮಾಡಿದರು.

ಸಚಿವರ ಈ ವಿನೂತನವಾದ ಜಾಗೃತಿ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.


Spread the love

Leave a Reply

Your email address will not be published. Required fields are marked *