ಕೇಡುಗಾಲದಲ್ಲಿ ಕೈ ಹಿಡಿದ ‘ಈಶ್ವರಲಾಲ ಅಗ್ನಿಹೋತ್ರಿ’- ಬಡವರ ಪಾಲಿನ ದೇವರು…!

ಧಾರವಾಡ: ಕೊರೋನಾ ಸಮಯದಲ್ಲಿ ಬಡವರ ಬದುಕು ಪ್ರತಿ ದಿನವೂ ದುರ್ಭರವಾಗುತ್ತಿದ್ದ ಸಮಯದಲ್ಲೆ, ಬಡವರ ಬಂಧುವಾಗಿ ಕೆಲಸ ಮಾಡುವಲ್ಲಿ ಈಶ್ವರಲಾಲ ಅಗ್ನಿಹೋತ್ರಿ ಯಶಸ್ವಿಯಾಗಿದ್ದು, ಯಾವುದೇ ಪ್ರಚಾರ ಬಯಸದೇ ಸದ್ದಿಲ್ದೇ ಸಹಾಯ ಮಾಡುತ್ತಿದ್ದಾರೆ.

ಧಾರವಾಡದ ವಾರ್ಡ್ 13ರಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಈಶ್ವರಲಾಲ ಅಗ್ನಿಹೋತ್ರಿ ಅವರು, ಪ್ರತಿಯೊಬ್ಬರ ಮನೆಗೆ ಆಹಾರದ ಕಿಟ್ ಗಳನ್ನ ಪೂರೈಕೆ ಮಾಡುತ್ತಿದ್ದಾರೆ. ತಾವೇ ಖುದ್ದಾಗಿ ಮನೆ ಮನೆಗೆ ತೆರಳಿ, ಬಡವರ ಪಾಲಿನ ದೇವರಾಗಿದ್ದಾರೆ.
ಕಷ್ಟ ಕಾಲದಲ್ಲಿ ಯಾವುದೇ ಫಲಾಪೇಕ್ಷೆಯಿಲ್ಲದೇ ಕಾರ್ಯನಿರ್ವಹಿಸುತ್ತಿರುವ ಇವರ ಕಾರ್ಯವನ್ನ ಸಾರ್ವಜನಿಕರು ಕೊಂಡಾಡುತ್ತಿದ್ದಾರೆ. ಕಳೆದ ಲಾಕ್ ಡೌನ್ ಸಮಯದಿಂದಲೂ ಪದೇ ಪದೇ ಜನರಿಗೆ ಕಿಟ್ ವಿತರಣೆ ಮಾಡುತ್ತಿದ್ದಾರೆ.
ಬಹುತೇಕ ಬಡವರ ಕುಟುಂಬಗಳನ್ನ ಹೊಂದಿರುವ ಪ್ರದೇಶದಲ್ಲಿ ಯಾರಿಗೂ ಗೊತ್ತಾಗದ ಹಾಗೇ ಕಾರ್ಯನಿರ್ವಹಣೆ ಮಾಡುತ್ತಿರುವುದರಿಂದ, ಕೇಡುಗಾಲದಲ್ಲಿ ಕೈ ಹಿಡಿದವನೇ ದೇವರು ಎನ್ನುತ್ತಿದ್ದಾರೆ.
ಈಶ್ವರಲಾಲ ಅಗ್ನಿಹೋತ್ರಿಯಂತವರ ಸಂಖ್ಯೆ ಹೆಚ್ಚಾಗಬೇಕಿದೆ. ಇವರ ಕಾರ್ಯ ಇನ್ನುಳಿದವರಿಗೆ ಮಾದರಿಯೂ ಆಗಬೇಕಿದೆ.