ಕಾಫಿ ಚೀಟಿ ಕೊಡಲು ಹೋಗಿದ್ದವ ಸತ್ತಿದ್ದು ಅಪಘಾತದಲ್ಲಿಯಂತೆ: ಅಚ್ಚರಿ ಮಾಹಿತಿ ಹೊರ ಹಾಕಿದ ವರಿಷ್ಠಾಧಿಕಾರಿ
1 min readವಿಜಯಪುರ: SSLC ಪರೀಕ್ಷೆ ನಡೆಯುತ್ತಿದ್ದಾಗ ಕಾಫಿ ಚೀಟಿ ಕೊಡಲು ಹೋಗಿದ್ದ ಯುವಕ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಸಾವನ್ನಪ್ಪಿದ್ದ ಪ್ರಕರಣದ ಅಸಲಿಯತ್ತನ್ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ ಅಗರವಾಲ್ ಹೊರ ಹಾಕಿದ್ದಾರೆ.
ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಹೂವಿನಹಿಪ್ಪರಗಿಯ ವಿಶ್ವಚೇತನ ಪ್ರೌಢಶಾಲೆಯಲ್ಲಿ ತನ್ನ ತಂಗಿಗೆ ಕಾಫಿ ಚೀಟಿ ಕೊಡಲು ಹೋಗಿ ಸಾಗರ ಚೆಲವಾದಿ ಸಾವನ್ನಪ್ಪಿದ್ದಾನೆಂದು ವರದಿಯಾಗಿತ್ತು. ಆದರೆ, ಪೊಲೀಸರು ಇದನ್ನ ಸಮಗ್ರ ತನಿಖೆ ಮಾಡಿದಾಗ ಸತ್ಯ ಹೊರಗೆ ಬಿದ್ದಿದೆ.
ಮೃತ ಯುವಕನ ಪಾಲಕರು ಕೂಡಾ ಪೊಲೀಸರ ವಿರುದ್ಧವೇ ಆರೋಪ ಮಾಡಿದ್ದರು. ಆದರೆ, ನಡೆದದ್ದೇ ಬೇರೆ. ಸಾಗರ ಚೆಲವಾದಿ ತಮ್ಮೂರಿನ ಬಸಪ್ಪ ಚೆಲವಾದಿಯೊಂದಿಗೆ ಬೀಜ-ಗೊಬ್ಬರ ತೆಗೆದುಕೊಂಡು ಮರಳಿ ಬರುವಾಗ ಬೈಕ್ ಸ್ಕಿಡ್ ಆಗಿ ಬಿದ್ದು ಸಾವನ್ನಪ್ಪಿದ್ದು, ಸ್ಥಳೀಯರು ಆತನನ್ನ ಆಸ್ಪತ್ರೆಗೆ ದಾಖಲು ಮಾಡಲು ಪ್ರಯತ್ನಿಸಿದ್ದರು ಎನ್ನುವುದು ಗೊತ್ತಾಗಿದೆ. ಹೀಗಾಗಿ ಪ್ರಕರಣವೂ ಪೊಲೀಸರಿಂದ ನಡೆದಿಲ್ಲ ಎಂಬುದು ಸಾಬೀತಾದಂತಾಗಿದೆ.