ಬೆಳೆವಿಮೆ “ಪರಿಹಾರ 50-50”- ವಂಚನೆಯ ಮೂಲದಲ್ಲಿ ಕಿರೇಸೂರದ ಗ್ರಾಪಂ ಸದಸ್ಯನ ಪಾತ್ರ ಪಕ್ಕಾ….!!!

ಧಾರವಾಡ: ಮುಂಗಾರಿನ ಹೆಸರು ಬೆಳೆಯ ವಿಮೆಯ ಹೆಸರಿನಲ್ಲಿ ನಡೆದಿರುವ ವಂಚನೆಯಲ್ಲಿ ಹುಬ್ಬಳ್ಳಿ ತಾಲೂಕಿನ ಕಿರೇಸೂರ ಗ್ರಾಮ ಪಂಚಾಯತಿ ಸದಸ್ಯನೋರ್ವನ ಪಾತ್ರ ಇರುವುದು ಬಹುತೇಕ ಪಕ್ಕಾ ಆಗಿದೆ.
ಇದೇ ಕಿರೇಸೂರ ಗ್ರಾಮದಲ್ಲಿ ಹೆಸರು ಬೆಳೆ ವೀಕ್ಷಣೆ ಮಾಡಲು ಬಂದಿದ್ದ ವೇಳೆಯಲ್ಲಿ ರಾತ್ರೋರಾತ್ರಿ ಹೆಸರು ಕಾಯಿ ಬಿಡಿಸಿ, ಮೋಸದ ಜಾಲದಲ್ಲಿ ಮೊದಲ ಬಾರಿಗೆ ಪಂಚಾಯತಿ ಸದಸ್ಯನಾಗಿರುವ ನೀಚನ ಪಾತ್ರ ಇರುವುದು ಹೊರಬರತೊಡಗಿದೆ.
ಚಸ್ಮಾ ಧರಿಸುವ ವಿಎನೂ ಈತನಿಗೆ ಸಾಥ್ ನೀಡಿದ್ದು, ಗ್ರಾಮದ ದೇವಸ್ಥಾನದಲ್ಲಿಯೂ ಚರ್ಚೆ ಆಗಿದೆ. ಗದಗನ ಶಿನ್ಯಾನ ಜೊತೆ ಸಂಪರ್ಕ ಹೊಂದಿರುವ ಈ ಮಹಾಶಯನಿಗೆ ಶೀಘ್ರದಲ್ಲಿ ಕೈಕೊಳ ಬೀಳುವುದು ಬಾಕಿಯಿದೆ.
ಕೆಲ ಶ್ರೀಮಂತ ರೈತರೆನಿಸಿಕೊಂಡ ಏಜೆಂಟರು ಹಾಕಿರುವ ದುಡ್ಡು ಹೊರಬರಿಸಲು ಶತಪ್ರಯತ್ನ ನಡೆಸುತ್ತಿದ್ದಾರೆ. ಆದರೆ, ಜಿಲ್ಲಾಧಿಕಾರಿಗಳು ಖಡಕ್ಗಾಗಿ ನಿಂತು ಈ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.