Posts Slider

Karnataka Voice

Latest Kannada News

ಫಸ್ಟ್ ಪ್ರೈಜ್ 30ಕೆಜಿ ಕುರಿ, 1ಕೇಸ್ ಬಿಯರ್, 1ಫುಲ್ ಬಾಟ್ಲ್ ವಿಸ್ಕಿ: ಮುಗಿಬಿದ್ದವೂ ಕ್ರಿಕೆಟ್ ಟೀಂ

1 min read
Spread the love

ಚಿಕ್ಕಮಗಳೂರು: ರಾಜ್ಯದ ಯಾವುದೇ ಮೂಲೆಯಲ್ಲೂ ವಿಚಾರ ಮಾಡಲು ಆಗದ ಕ್ರಿಕೆಟ್ ಟೂರ್ನಿಯ ಪ್ರೈಜಗಳನ್ನ ಘೋಷಣೆ ಮಾಡುವ ಮೂಲಕ, ಹಲವರ ಕೆಂಗಣ್ಣಿಗೆ ಗುರಿಯಾಗಿರುವ ಘಟನೆಯಿದು.

ಎನ್.ಆರ್. ಪುರ ತಾಲೂಕಿನ ಬಾಳೆಹೊನ್ನೂರು ಬಳಿಯ ಕಡಬಗೆರೆಯಲ್ಲಿ ಆಯೋಜಿಸಿದ್ದ ಕ್ರಿಕೆಟ್ ಟೂರ್ನಿಯಲ್ಲಿ ಫಸ್ಟ್ ಪ್ರೈಸ್ 1 ಕುರಿ,1 ಕೇಸ್ ಬಿಯರ್,1 ಬಾಟಲಿ ವಿಸ್ಕಿ ಕೊಡಲು ನಿರ್ಧರಿಸಲಾಗಿದೆ.

ಸೆಕೆಂಡ್ ಪ್ರೈಸ್ 6 ನಾಟಿ ಕೋಳಿ, 1 ಬಾಟಲಿ ಡ್ರಿಂಕ್ಸ್,1 ಕೇಸ್ ಬಿಯರ್ ನಿರ್ಧಾರ ಮಾಡಲಾಗಿದ್ದು, ಸಮಾಧಾನಕರ ಬಹುಮಾನವಾಗಿ ಎಲ್ಲರಿಗೂ 7ಅಪ್ ಉಚಿತವಾಗಿ ನೀಡಲಾಗುವುದೆಂದು ಸಂಘಟಕರು ಹೇಳಿದ್ದರು. ಅಷ್ಟೇ ಅಲ್ಲ, ಮ್ಯಾನ ಆಪ್ ದಿ ಸಿರೀಸ್ 5 ಕೆಜಿ ಈರುಳ್ಳಿ, ಬೆಸ್ಟ್ ಬ್ಯಾಟ್ಸಮನಗೆ 1 ಕೆಜಿ ಖಾರಪುಡಿ ಹಾಗೂ ಬೆಸ್ಟ್ ಬೌಲರಗೆ 2ಲೀಟರ್ ಸನ್ ಪ್ಲವರ್ ಆಯಿಲ್ ಕೊಡಲಾಗುವುದೆಂದು ಹೇಳಲಾಗಿತ್ತು.

ಖಾಂಡ್ಯ ಕ್ರಿಕೆಟ್ ಹಬ್ಬದ ಹೆಸರಿನಲ್ಲಿ ಇಂತಹ ಪ್ರೈಜ್ ಕೊಡುತ್ತಾರೆ ಎಂದ ತಕ್ಷಣವೇ 400ಕ್ಕೂ ಹೆಚ್ಚು ತಂಡಗಳು ಎಂಟ್ರಿ ಮಾಡಿಸಿದ್ದವು. ಆದರೆ, ವಿವಾದಿತ ಪ್ರೈಜಗಳನ್ನ ಕೊಡಲಾಗುತ್ತಿದೆ ಎಂದು ಪೊಲೀಸರು ಟೂರ್ನಿಯನ್ನ ರದ್ದುಗೊಳಿಸಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed