Posts Slider

Karnataka Voice

Latest Kannada News

ಪೊಲೀಸ್ ಇನ್ಸಪೆಕ್ಟರ್ ಅಮಾನತ್ತು..!

1 min read
Spread the love

ರಾಯಚೂರು: ದರೋಡೆ ಪ್ರಕರಣ ಸೇರಿದಂತೆ ಎರಡು ಪ್ರಕರಣದಲ್ಲಿ ತನಿಖೆ ಮಾಡುವಲ್ಲಿ ಕರ್ತವ್ಯಲೋಪ ಮಾಡಿರುವ ಹಿನ್ನೆಲೆಯಲ್ಲಿ ಯರಗೇರಾ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರನ್ನ ಅಮಾನತ್ತು ಮಾಡಿ ಐಜಿಪಿ ಆದೇಶ ಹೊರಡಿಸಿದ್ದಾರೆ.

ರಾಯಚೂರು ತಾಲೂಕಿನ ಯರಗೇರಾ ಪೊಲೀಸ್ ಠಾಣೆಯ ಸಿಪಿಐ ಅಂಬೆರಾಯ ಎಂ.ಕಮಾನಮನಿ  ಅವರು ಅಮಾನತ್ತಾಗಿದ್ದಾರೆ. ಕರ್ತವ್ಯ ಲೋಪ ಆರೋಪದ ಮೇಲೆ ಅಮಾನತುಗೊಳಿಸಿ ಐಜಿಪಿ ನಂಜುಂಡಸ್ವಾಮಿ ಆದೇಶ ಹೊರಡಿಸಿದ್ದಾರೆ.

ಶಕ್ತಿನಗರದಲ್ಲಿ ಹಿಂದೆ ನಡೆದಿದ್ದ ದರೋಡೆ ಪ್ರಕರಣ ಸೇರಿ ಎರಡು ಪ್ರಕರಣ ತನಿಖೆಯಲ್ಲಿ ಕರ್ತವ್ಯ ಲೋಪ ಎಸಗಿರುವ ಬಗ್ಗೆ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಈ ಕ್ರಮವನ್ನ ಜರುಗಿಸಲಾಗಿದೆ.


Spread the love

Leave a Reply

Your email address will not be published. Required fields are marked *