ಕೊಟ್ಟೂರಲ್ಲಿ ಸಿಪಿಐ ಕಚೇರಿಗಾಗಿ ಮುಷ್ಕರ- ಸಂಘಟನೆಗಳ ಬೆಂಬಲ
1 min readಬಳ್ಳಾರಿ: ಜಿಲ್ಲೆಯ ಕೊಟ್ಟೂರ ಪಟ್ಟಣದಲ್ಲಿ ವೃತ್ತ ಪೊಲೀಸ್ ಇನ್ಸ್ ಪೆಕ್ಟರ್ ಕಚೇರಿ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ಹಲವು ಸಂಘಟನೆಗಳು ಹೋರಾಟ ನಡೆಸಿದ್ದು, ಹೋರಾಟಕ್ಕೆ ಕೆಲವೇ ಗಂಟೆಗಳಲ್ಲಿ ಜಯವೂ ಸಿಕ್ಕಿದೆ.
ಕೊಟ್ಟೂರು ಪಟ್ಟಣದಲ್ಲಿ ನೂತನವಾಗಿ ಸಿಪಿಐ- ಪೊಲೀಸ್ ಠಾಣೆ ಕಚೇರಿಗಳನ್ನು ನಿರ್ಮಾಣ ಮಾಡಬೇಕೆಂದು ಕಾರ್ಯ ನಿರತ ಪತ್ರಕರ್ತರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು. ಮುಷ್ಕರಕ್ಕೆ ಜೆಸಿಐ ಕೊಟ್ಟೂರು ಕಾಟನ್, ಜಾಂಬವ ಯುವ ಸೇನಾ,ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ವಿದ್ಯಾರ್ಥಿ ತಾಲೂಕು ಘಟಕ ಕಾಂಗ್ರೆಸ್,ಕರ್ನಾಟಕ ದಲಿತ ಸಂಘರ್ಷ ಸಮಿತಿ,ಮಹಿಳಾ ಸಂಘ, ಸ್ಮಶಾನ ಕಾರ್ಮಿಕರ ಸಂಘ, ಆಟೋ ಚಾಲಕರ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ಇನ್ನೂ ಅನೇಕ ಸಂಘಟನೆಯ ಬೆಂಬಲದೊಂದಿಗೆ ಮುಷ್ಕರ ಹಮ್ಮಿಕೊಳ್ಳಲಾಗಿತ್ತು.
ಮುಷ್ಕರದ ಸ್ಥಳಕ್ಕೆ ಆಗಮಿಸಿದ DYSP, ನನ್ನ 20 ವರ್ಷ ಸೇವೆಯಲ್ಲಿ ಮೊದಲ ಬಾರಿಗೆ ಪೊಲೀಸ್ ರ ಪರವಾಗಿ ಮುಷ್ಕರ ಹಮ್ಮಿಕೊಳ್ಳುವುದನ್ನು ನೋಡುತ್ತಿದ್ದೇನೆ ಎಂದು ಅಭಿನಂದನೆ ಸಲ್ಲಿಸಿದರು. ಈ ಸಮಯದಲ್ಲಿ ಮಾತನಾಡಿದ ಅವರು, ಗುತ್ತಿಗೆ ಟೆಂಡರ್ ಪ್ರಕ್ರಿಯೆ ಸಂಪೂರ್ಣ ಮುಗಿದಿದ್ದು, ಇನ್ನೂ ಕೆಲವೇ ದಿನಗಳಲ್ಲಿ ಕಾಮಗಾರಿ ಪ್ರಾರಂಭ ಮಾಡುತ್ತೇವೆ ಎಂದು ತಿಳಿಸಿದರು.