Posts Slider

Karnataka Voice

Latest Kannada News

ಪೊಲೀಸ್ ಕಮೀಷನರ್ ಬೆಳ್ಳಂಬೆಳಿಗ್ಗೆ ಹುಬ್ಬಳ್ಳಿಯಲ್ಲಿ ಮಾಡಿದ್ದೇನು ಗೊತ್ತಾ..!

1 min read
Spread the love

ಹುಬ್ಬಳ್ಳಿ: ನಿನ್ನೆಯಷ್ಟೇ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಆಗಿ ಅಧಿಕಾರ ಸ್ವೀಕರಿಸಿರುವ ಐಪಿಎಸ್ ಲಾಬು ರಾಮ್, ಇಂದು ಬೆಳ್ಳಂಬೆಳಿಗ್ಗೆ ವಾಣಿಜ್ಯನಗರಿಯಲ್ಲಿ ರೌಂಡ್ ಹಾಕಿದ್ರು. ಆದರೆ, ಯಾರೋಬ್ಬರು ಪೊಲೀಸರು ಕಾಣಲೇ ಇಲ್ಲ.

ತಾವೂ ರೌಂಡ ಮಾಡುತ್ತಿದ್ದ ಸಮಯದಲ್ಲಿ ಬಹುತೇಕ ಪೊಲೀಸರು ಫೀಲ್ಡನಲ್ಲಿ ಇರಬೇಕಾಗಿತ್ತು ಎಂದುಕೊಂಡ ಪೊಲೀಸ್ ಕಮೀಷನರ್ ಲಾಬು ರಾಮ್, ವಾಕಿಯಲ್ಲಿ ಟಾಕ್ ಆರಂಭಿಸಿದರು. ತಕ್ಷಣವೇ ಕೆಲವೇ ಕ್ಷಣಗಳಲ್ಲಿ ಪ್ರಮುಖ ರಸ್ತೆಯಲ್ಲಿ ಪೊಲೀಸರು ಕಾಣಿಸತೊಡಗಿದರು. ಬಹುತೇಕ ಒಂದೂ ವರ್ಷದ ಮೇಲೆ ಇಂತಹದೊಂದು ವಾತಾವರಣ ಇಲಾಖೆಯಲ್ಲಿ ಕಂಡು ಬಂದಿತು. ಸಂಚಾರಿ ಠಾಣೆಯ ಹಿರಿಯ ಅಧಿಕಾರಿಗಳು ಕೂಡಾ ವಾಹನ ಸಮೇತ ಚೆನ್ನಮ್ಮ ವೃತ್ತದಲ್ಲಿ ಕಾಣಿಸಿಕೊಂಡರು.

ಅಧಿಕಾರ ವಹಿಸಿಕೊಂಡ ಮರುದಿನವೇ ಫೀಲ್ಡಿಗೀಳಿದು ಬಿಸಿ ಮುಟ್ಟಿಸಿದ ಪೊಲೀಸ್ ಕಮೀಷನರ್, ಇದೇ ರೀತಿ ಮುಂದುವರೆಯಲಿ ಎಂಬುದು ಪ್ರಜ್ಞಾವಂತರ ಕೋರಿಕೆಯಾಗಿದೆ.


Spread the love

Leave a Reply

Your email address will not be published. Required fields are marked *

You may have missed