ಎಐಸಿಸಿಯಿಂದ ಹಿಡಿದು ಪ್ರತಿಯೊಬ್ಬರು ವಿನಯ ಕುಲಕರ್ಣಿ ಜೊತೆ ಇದ್ದೇವೆ: ಶಾಸಕಿ ಲಕ್ಷ್ಮೀ ಹೆಬ್ಬಾಳಕರ
1 min readಧಾರವಾಡ: ಮಾಜಿ ಸಚಿವ ವಿನಯ ಕುಲಕರ್ಣಿ, ಯೋಗೇಶಗೌಡ ಗೌಡರ ಹತ್ಯೆಯಲ್ಲಿ ಬಂಧನವಾಗಿರುವ ಹಿನ್ನೆಲೆಯಲ್ಲಿ ಬೆಳಗಾವಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ, ಇಂದು ಧಾರವಾಡದ ಬಾರಾಕೋಟ್ರಿಯಲ್ಲಿರುವ ನಿವಾಸಕ್ಕೆ ಭೇಟಿ ನೀಡಿ, ಕುಟುಂಬದ ಸದಸ್ಯರೊಂದಿಗೆ ಮಾತನಾಡಿ, ಧೈರ್ಯ ತುಂಬಿದರು.
ಏನು ಹೇಳಿದ್ದಾರೆ ಗೊತ್ತಾ.. ಇಲ್ಲಿದೆ ನೋಡಿ ವೀಡಿಯೋ
ವಿನಯ ಕುಲಕರ್ಣಿರವರ ಕುಟುಂಬದ ಸದಸ್ಯರೊಂದಿಗೆ ಭೇಟಿಯಾದ ನಂತರ, ಮಾತನಾಡಿದ ಲಕ್ಷ್ಮೀ ಹೆಬ್ಬಾಳಕರ, ಬಿಜೆಪಿ ಕಾಂಗ್ರೆಸ್ದವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ರಾಜಕೀಯವಾಗಿ ಟಾರ್ಗೆಟ್ ಮಾಡುತ್ತಿದ್ದಾರೆ. ಕಾನೂನಿಗೆ ನಾವು ತಲೆ ಬಾಗುತ್ತೇವೆ. ಕಾನೂನು ಪ್ರಕಾರ ಏನು ಆಗಬೇಕು ಆಗಲಿ. ಆದರೆ, ಹೆದರಿಸುವ ಕ್ರಮ ಸರಿಯಲ್ಲ ಎಂದು ಹೇಳಿದರು.
ವಿನಯ ಅಣ್ಣ ಕ್ಲೀನ್ ಚೀಟ ಪಡೆದು ಆದಷ್ಟು ಬೇಗ ಹೊರಗೆ ಬರುತ್ತಾರೆ. ನಮ್ಮ ಪಕ್ಷದ ಎಐಸಿಸಿಯಿಂದ ಹಿಡಿದು ಎಲ್ಲ ನಾಯಕರು, ಕಾರ್ಯಕರ್ತರು ವಿನಯ ಕುಲಕರ್ಣಿ ಜೊತೆಗಿದಾರೆ. ಕೆಪಿಸಿಸಿ ಅಧ್ಯಕ್ಷ, ಸಿದ್ದರಾಮಯ್ಯ ಸಹ ಮನೆಗೆ ಬರುತ್ತಾರೆ ಎಂದು ಹೇಳಿದರು.
ಇಡಿ, ಸಿಬಿಐಗಳನ್ನು ತಮಗೆ ಬೇಕಾದಂತೆ ಬಿಜೆಪಿ ಉಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಬೇಸರವ್ಯಕ್ತಪಡಿಸಿದರು.