ಅವಳಿನಗರದ ಜನರಿಗಾಗಿ “ಮಿಡಿದ ಮುಕಳೆಪ್ಪ”- ಕಮೀಷನರ್ ಶಶಿಕುಮಾರ ಹೇಳಿರೋದೇನು…!?

ಹುಬ್ಬಳ್ಳಿ: ಉತ್ತರಕರ್ನಾಟಕದ ಖ್ಯಾತ ಯೂಟ್ಯೂಬರ್ ಇದೀಗ ಹುಬ್ಬಳ್ಳಿ ಧಾರವಾಡ ಅವಳಿನಗರದ ಜನರಿಗಾಗಿ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದ್ದು, ಪೊಲೀಸ್ ಕಮೀಷನರ್ ಅವರ ಪ್ರೇರಣೆ ಸಾರ್ಥಕವಾಗಿದೆ.
ಈ ಕುರಿತು ಸ್ವತಃ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಅವರು ಮಾಹಿತಿಯನ್ನ ನೀಡಿರುವ ವೀಡಿಯೋ ಇಲ್ಲಿದೆ ನೋಡಿ…
ಅವಳಿನಗರವೂ ಸೇರಿದಂತೆ ಕಮೀಷನರೇಟ್ ವ್ಯಾಪ್ತಿಯಲ್ಲಿ ರಸ್ತೆ ಅಪಘಾತದಲ್ಲಿ 100 ಕ್ಕೂ ಹೆಚ್ಚು ಜನರು ಸಾವಿಗೀಡಾಗುತ್ತಿದ್ದಾರೆ. ಮುಕಳೆಪ್ಪ ಹೆಸರಿನಲ್ಲಿ ಪ್ರಖ್ಯಾತಿ ಪಡೆದಿರುವ ಖಾಜಾ ಇದೀಗ ಜನರಿಗೆ ಜಾಗೃತಿ ಮೂಡಿಸಿದ್ದು, ಶೀಘ್ರದಲ್ಲಿ ವೀಡಿಯೋಗಳು ಹೊರಬರಲಿವೆ.