ಮನೆಗಳ್ಳತನಕ್ಕೆ ಹೋದವರು ಕಾರನ್ನೇ ಕದ್ದೋಯ್ದರು..!
Warning: Attempt to read property "post_excerpt" on null in /home/karnatakavoice2026s/webapps/karnatakavoice2026s/wp-content/themes/newsphere/inc/hooks/hook-single-header.php on line 67
ಹುಬ್ಬಳ್ಳಿ: ಶಹರದ ರೇಣುಕಾನಗರದಲ್ಲಿ ಮನೆಯೊಂದರ ಬಾಗಿಲು ಮುರಿದು ಕಳ್ಳತನ ಮಾಡಲು ಹೋಗಿದ್ದವರಿಗೆ, ಪುಡಿಗಾಸು ಸಿಕ್ಕ ಪರಿಣಾಮ, ಮನೆ ಮುಂದೆ ನಿಲ್ಲಿಸಿದ್ದ ಕಾರನ್ನೇ ಕಳ್ಳತನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಗೋಕುಲ ರಸ್ತೆಯ ರೇಣುಕಾನಗರ ನಿವಾಸಿ ಷಣ್ಮುಖ ವಾಲಿ ಎಂಬುವರ ಮನೆಯಲ್ಲಿಯೇ ಕಳ್ಳತನವಾಗಿದ್ದು, ಮನೆಯಲ್ಲಿ ಯಾರೂ ಇಲ್ಲದೆ ಇದ್ದಾಗ ಘಟನೆ ನಡೆದಿದೆ.
ಮನೆಯ ಬಾಗಿಲನ್ನು ಮುರಿದು ಹೋದ ಕಳ್ಳರಿಗೆ ಮನೆಯಲ್ಲಿ ಹತ್ತು ಸಾವಿರ ನಗದು ಜೊತೆಗೆ ಚಿಲ್ಲರೆ ಹಣ ಮಾತ್ರ ಸಿಕ್ಕಿದ್ದು, ಮನೆಯ ಮುಂದೆ ನಿಲ್ಲಿಸಿದ್ದ ಸ್ವಿಫ್ಟ್ ಡಿಸೈರ್ ಕಾರನ್ನು ಕೂಡಾ ಕದ್ದುಕೊಂಡು ಹೋಗಿದ್ದಾರೆ. ಈ ಸಂಬಂಧ ಹುಬ್ಬಳ್ಳಿಯ ಗೋಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಹುಬ್ಬಳ್ಳಿ-ಧಾರವಾಡದಲ್ಲಿ ಕಳೆದ ಎರಡು ತಿಂಗಳುಗಳ ಹಿಂದಿನಿಂದ ನಾಲ್ಕು ಕಾರುಗಳ ಕಳ್ಳತನವಾಗಿದ್ದು, ಇಲ್ಲಿಯವರೆಗೆ ಯಾವೊಂದು ವಾಹನವೂ ಪತ್ತೆಯಾಗಿಲ್ಲ..
