ಹುಬ್ಬಳ್ಳಿ ಬಳಿ ಜಖಂಗೊಂಡ ಅನಾಥ ಕಾರು…. ನಮ್ಮ ಲಿಮಿಟ್ಸಲ್ಲಾ, ನಿಮ್ಮ ಲಿಮಿಟ್ಸಲ್ಲಾ…! ಕಾರಲ್ಲಿದ್ದವರೂ ಏನಾದರೂ…
Warning: Attempt to read property "post_excerpt" on null in /home/karnatakavoice2026s/webapps/karnatakavoice2026s/wp-content/themes/newsphere/inc/hooks/hook-single-header.php on line 67
ಹುಬ್ಬಳ್ಳಿ: ನಗರದ ಗದಗ ರಸ್ತೆಯ ಒಂಟಿ ಹನಮಪ್ಪ ಮಂದಿರದ ಸಮೀಪದರಲ್ಲಿನ ಐಸಿಸಿ ಗೋಡೌನದ ಬಳಿ ಕಾರೊಂದು ಪಲ್ಟಿಯಾಗಿದ್ದು, ಅದರಲ್ಲಿದ್ದವರು ಏನಾಗಿದ್ದಾರೋ ಗೊತ್ತೆಯಿಲ್ಲ. ಅಷ್ಟೇ ಏಕೆ.. ಕಾರು ಬಿದ್ದ ಜಾಗ ಯಾವ ಠಾಣೆ ವ್ಯಾಪ್ತಿಗೆ ಬರುತ್ತೇ ಎನ್ನುವುದೇ ತಿಳಿಯದಾಗಿದ್ದು, ಎಲ್ಲ ಠಾಣೆಯವರು ಇದು ನನ್ನ ವ್ಯಾಪ್ತಿಗೆ ಬರೋದಿಲ್ಲವೆನ್ನುತ್ತಿದ್ದಾರೆ.
ಹೌದು.. ಇಂತಹದೊಂದು ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಬಿದ್ದಿರೋ ಕಾರು ಸಂಖ್ಯೆ ಕೆಎ-01, ಎಸಿ7443 ಭೀಮೇಶ ಎನ್ನುವವರ ಹೆಸರಿನಲ್ಲಿದೆ. ಇದು ಐಸಿಸಿ ಗೋಡೌನ ಬಳಿ ಯಾವಾಗ ಪಲ್ಟಿಯಾಗಿತ್ತು ಎಂಬುದು ಯಾರಿಗೂ ಗೊತ್ತಿಲ್ಲ. ಇದರಲ್ಲಿ ಎಷ್ಟು ಜನಾ ಇದ್ದರೂ ಎಂಬುದು ಗೊತ್ತಿಲ್ಲ.
ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಗೆ ಬರೋದಿಲ್ಲವೆಂದ್ರು, ಹುಬ್ಬಳ್ಳಿ ಪೂರ್ವ ಸಂಚಾರಿ ಠಾಣೆಗೇನಾದರೂ ಬರತ್ತೆ ಅಂದುಕೊಂಡರೇ, ಅದು ನಮಗೆ ಬರೋದಿಲ್ಲವೆಂದ್ರು. ಉತ್ತರ ಸಂಚಾರಿ ಠಾಣೆ ವ್ಯಾಪ್ತಿಗೇನಾದರೂ ಬರಬಹುದಾ ಎಂದು ತಡಕಾಡಿದ್ರೇ, ಅವರಂತೂ ಆ ಏರಿಯಾ ನಮಗೆ ಸಂಬಂಧವೇ ಇಲ್ಲಾ ಅಂದುಬಿಟ್ರು.
ಹಾಗಾದರೇ, ಈ ವಾಹನ ಯಾರದ್ದೂ, ಯಾವಾಗ ಪಲ್ಟಿಯಾಗಿದೆ, ಎಷ್ಟು ಜನಾ ಇದ್ರೂ ಎಂದು ಪ್ರಶ್ನಿಸುವ ಮುನ್ನ, ದಯವಿಟ್ಟು ಕಾರು ಬಿದ್ದಿರೋ ಈ ಪ್ರದೇಶ ಯಾವ ಠಾಣೆ ಲಿಮಿಟ್ಸ್ ಗೆ ಬರುತ್ತೆ ಎಂಬುದನ್ನ ಪೊಲೀಸರು ಪತ್ತೆ ಹಚ್ಚಬೇಕಿದೆ. ಲಿಮಿಟ್ಸ್ ಗೊತ್ತಾದ ಮೇಲೆ, ಇನ್ನುಳಿದ ಪ್ರಶ್ನೆಗಳಿಗೆ ಉತ್ತರವನ್ನ ಹುಡುಕಿದರಾಯಿತು..


