Posts Slider

Karnataka Voice

Latest Kannada News

ಬಿಜೆಪಿ ಮುಖಂಡ ಕೊರೋನಾಗೆ ಬಲಿ: ನಿಷ್ಠಾವಂತ ಪ್ರಮುಖ ಇನ್ನಿಲ್ಲ

1 min read
Spread the love

ಬೆಳಗಾವಿ: ಭಾರತೀಯ ಜನತಾ ಪಕ್ಷದ ಬೆಳಗಾವಿ ವಿಭಾಗದ ಸಹ ಸಂಘಟನಾ ಕಾರ್ಯದರ್ಶಿಯಾಗಿದ್ದ ರವಿ ಹಿರೇಮಠ    ಕೊರೋನಾದಿಂದ ಸಾವಿಗೀಡಾಗಿದ್ದು, ಅವರಿಗೆ 54 ವರ್ಷ ವಯಸ್ಸಾಗಿತ್ತು.

ಎರಡು ಬಾರಿ ಕೊರೋನಾ ಸೋಂಕು ತಗುಲಿದ್ದರೂ ಗುಣಮುಖರಾಗಿ ಬಂದಿದ್ದ ರವಿ ಹಿರೇಮಠ, ಮತ್ತೆ ಅದೇ ಖಾಯಿಲೆಗೆ ಬಳಲಿ, ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ. ಮೂರನೇಯ ಬಾರಿಯೂ ಕೊರೋನಾ ತಗುಲಿದ್ದರಿಂದ ದೇಹದ ಅನೇಕ ಅಂಗಾಂಗಗಳು ನ್ಯೂನ್ಯತೆಗೆ ಒಳಗಾಗಿದ್ದವು. ಹೀಗಾಗಿ ರವಿ ಹಿರೇಮಠ ಇನ್ನಿಲ್ಲವಾಗಿದ್ದಾರೆ.

ಕೆ.ಎಲ್.ಇ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರವಿ ಹಿರೇಮಠ, ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿಯೇ ನಿಧನರಾಗಿದ್ದಾರೆ. ಯಮಕನಮರಡಿ ಸಮೀಪ ಹಲಕರ್ಣಿಯವರಾಗಿದ್ದ ರವಿಯವರು ಬಿಜೆಪಿಯಲ್ಲಿ ನಿಷ್ಠಾವಂತ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದರು.

ರವಿ ಹಿರೇಮಠ ಅವರ ಸಾವಿಗೆ ಭಾರತೀಯ ಜನತಾ ಪಕ್ಷದ ಪ್ರಮುಖರು ಸಂತಾಪ ಸೂಚಿಸಿದ್ದು, ರವಿಯವರು ಪಕ್ಷದ ಮೇಲಿಟ್ಟ ಪ್ರೀತಿಯನ್ನ ಸ್ಮರಿಸಿದ್ದಾರೆ.


Spread the love

Leave a Reply

Your email address will not be published. Required fields are marked *