Karnataka Voice

Latest Kannada News

ಧಾರವಾಡ-71ರಲ್ಲಿ ಬಿಜೆಪಿಯವರಂಗ್ “ತಡ್ರೇಟ್” ಕೆಲ್ಸಾ ಮಾಡೂದಿಲ್ಲ: ಶಾಸಕ ವಿನಯ ಕುಲಕರ್ಣಿ…

ಧಾರವಾಡ-71 ಕ್ಷೇತ್ರದಲ್ಲಿ ಬಹಳ ಅನ್ಯಾಯವಾಗಿದೆ 

ಅದನ್ನ ಸರಿಪಡಿಸಲು ನಾವು ಸನ್ನದ್ಧರಾಗಿದ್ದೇವೆ

ಕಿತ್ತೂರು: ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಮಳೆಯಿಂದ ಮನೆಗಳು ಬಿದ್ದಾಗ ಬಿಜೆಪಿಯವರು ತಡ್ರೇಟ್ ಆಗಿ ನಡೆದುಕೊಂಡಿದ್ದಾರೆ. ಅವರ ಹಾಗೇ ನಾವು ಮಾಡುವುದಿಲ್ಲವೆಂದು ಶಾಸಕ ವಿನಯ ಕುಲಕರ್ಣಿ ಹೇಳಿದರು.

ಮಾಧ್ಯಮದವರ ಜೊತೆ ಕ್ಷೇತ್ರದ ಬಗ್ಗೆ ಮಾಹಿತಿ ನೀಡುತ್ತಿದ್ದ ಸಮಯದಲ್ಲಿ, ಕ್ಷೇತ್ರದ ಜನರಿಗೆ ಆಗಿರುವ ಅನ್ಯಾಯವನ್ನ ಎಳೆ ಎಳೆಯಾಗಿ ಬಿಚ್ಚಿಟ್ಟರು.

ಬಿಜೆಪಿ ಆಡಳಿತವಿದ್ದಾಗ ಹಲವು ರೀತಿಯಲ್ಲಿ ಬಡವರಿಗೆ ತೊಂದರೆಯಾಗಿದೆ. ಅದನ್ನ ಸರಿಪಡಿಸಲು ಈಗ ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದು, ಬಿಜೆಪಿಯವರ ಮನೆ ಬಿದ್ದರೂ ಅವರಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಶಾಸಕ ವಿನಯ ಕುಲಕರ್ಣಿ ತಿಳಿಸಿದರು.

Leave a Reply

Your email address will not be published. Required fields are marked *