ಬಿಇಓ ಪದಕಿ ಫೇಸ್ ಬುಕ್ ಲ್ಲಿ ದುಡ್ಡು ಕೇಳ್ತಾಯಿದ್ದಾರಾ… ಯಾವುದೇ ಕಾರಣಕ್ಕೂ ಹಾಕಬೇಡಿ…!
1 min readಧಾರವಾಡ: ನವಲಗುಂದ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಹೆಸರಿನ ಫೇಸ್ ಬುಕ್ ಅಕೌಂಟಿನಿಂದ ನಿಮಗೆ ಹಣ ಕೇಳುವ ಸಂದೇಶ ಮೇಸೆಂಜರ್ ಮೂಲಕ ಬರ್ತಾಯಿದೇಯಾ. ಹಾಗಾದ್ರೇ ಯಾವುದೇ ಕಾರಣಕ್ಕೂ ಒಂದೇ ಒಂದು ರೂಪಾಯಿಯನ್ನ ಹಾಕಬೇಡಿ.
ಹೌದು… ನವಲಗುಂದ ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ ಪದಕಿ ಹೆಸರಿನಲ್ಲಿರುವ ಅಕೌಂಟಿಂದ ಪರಿಚಿತರಿಗೆ ಸಂದೇಶ ಹೋಗುತ್ತಿವೆ. ಅದರಲ್ಲಿ ಅರ್ಜಂಟ್ ಹಣ ಕಳಿಸಿ ಎಂದು ರಿಕ್ವೆಸ್ಟ್ ಮಾಡಲಾಗುತ್ತಿದೆ. ಆದರೆ, ಅಂತಹದನ್ನ ಬಿಇಓ ಮಾಡದೇ, ಹ್ಯಾಕ್ ಮಾಡಿ ಮಾಡುತ್ತಿದ್ದಾರೆ.
ಬಹುತೇಕ ಶಿಕ್ಷಕ ವಲಯದಲ್ಲಿ ತಮ್ಮದೇ ರೀತಿಯಲ್ಲಿ ಗುರುತಿಸಿಕೊಂಡಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಈ ಫೇಸ್ಬುಕ್ ಹ್ಯಾಕಿಂಗ್ ಪ್ರಕರಣ ಸಾಕಷ್ಟು ಗೊಂದಲ ಮೂಡಿಸಿದೆ.
ಹಾಗಾಗಿ, ಯಾರೂ ಅವರ ಅಕೌಂಟಿಂದ ಬಂದ ಮೆಸೇಜ್ ಬಗ್ಗೆ ಅಪಾರ್ಥ ಮಾಡಿಕೊಳ್ಳದೇ, ಹಣವನ್ನೂ ಕಳಿಸದೇ ಇರುವುದು ಒಳಿತು.