ಬೆನಕನಹಳ್ಳಿಯಲ್ಲಿ “ಬೆನಕನ ಪಾಲಕನಿಗೆ ಅರಿಶಿನದ ಅಲಂಕಾರ”- ಮಿಂದೆದ್ದ ಭಕ್ತಗಣ…

ಕುಂದಗೋಳ: ಮಹಾಶಿವರಾತ್ರಿಯ ಅಂಗವಾಗಿ ತಾಲೂಕಿನ ಬೆನಕನಹಳ್ಳಿ ಗ್ರಾಮದ ಶ್ರೀ ಕಲ್ಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನ ನಡೆಸಿದ ಭಕ್ತರು, ಶಿವನ ಆರಾಧನೆ ಮಾಡಿದರು.
ಇಂದು ಬೆಳಿಗ್ಗೆಯಿಂದಲೇ ಭಕ್ತ ಸಮೂಹ ದೇವಸ್ಥಾನಕ್ಕೆ ಆಗಮಿಸಿ, ತಮ್ಮಿಷ್ಟಾರ್ಥಗಳ ಪೂರೈಕೆಗಾಗಿ ಪೂಜಿಸಿದರು.
ರುದ್ರಾಭಿಷೇಕ ಮಾಡುವ ಮೂಲಕ ಶಿವನ ಸ್ಮರಣೆಯನ್ನ ಇಮ್ಮಡಿಗೊಳಿಸಿಕೊಂಡರು. ಅಷ್ಟೇ ಅಲ್ಲ, ಶಿವಲಿಂಗಕ್ಕೆ ಅರಿಶಿನದ ಅಲಂಕಾರ ಮಾಡುವ ಮೂಲಕ, ಭಕ್ತಿಯ ಪರಾಕಾಷ್ಠೆಯನ್ನ ಮತ್ತಷ್ಟು ಹೆಚ್ಚಿಸಲಾಗಿತ್ತು.
ಬೆನಕನಹಳ್ಳಿ ಗ್ರಾಮದ ಬಹುತೇಕ ಮನೆ ಮನಗಳಲ್ಲಿಂದು ಶಿವನ ಆರಾಧನೆ ಮನೆ ಮಾಡಿತ್ತು.