Posts Slider

Karnataka Voice

Latest Kannada News

ಸಿಎಂ ಯಡ್ಯೂರಪ್ಪ ಕೈಕೊಟ್ರೂ: ಅರವಿಂದ ಬೆಲ್ಲದ ಅಸಮಾಧಾನ

1 min read
Spread the love

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ನನ್ನ ಮಂತ್ರಿ ಮಾಡುವ ಭರವಸೆ ನೀಡಿದ್ದರು. ನಿಮ್ಮ ತಂದೆಗೆ ಅನ್ಯಾಯ ಆಗಿತ್ತು. ಅದನ್ನ ನಿನ್ನ ಮೂಲಕ ಸರಿ ಮಾಡುತ್ತೇನೆ ಎಂದು ಹೇಳುತ್ತಲೇ ನನ್ನ ಮಂತ್ರಿ ಮಾಡದೇ ಉಳಿದು ಬಿಟ್ಟರೆಂದು ಧಾರವಾಡ ಪಶ್ಚಿಮ ಮತಕ್ಷೇತ್ರದ ಶಾಸಕ ಹಾಗೂ ಮಹಾನಗರ ಬಿಜೆಪಿ ಅಧ್ಯಕ್ಷ ಅರವಿಂದ ಬೆಲ್ಲದ ಅಸಮಾಧಾನವ್ಯಕ್ತಪಡಿಸಿದ್ದಾರೆ.

ಸಚಿವ ಸಂಪುಟ ವಿಸ್ತರಣೆ ಸಮಯದಲ್ಲಿ ತಾವು ಸಚಿವರಾಗುತ್ತೇವೆ ಎಂದುಕೊಂಡಿದ್ದ ಶಾಸಕ ಅರವಿಂದ ಬೆಲ್ಲದ ಅವರು ತೀವ್ರ ಅಸಮಾಧಾನಗೊಂಡಿದ್ದು, ವಿಧಾನಪರಿಷತನ್ ಐದು ಸದಸ್ಯರಿಗೆ ಮಂತ್ರಿ ಮಾಡಿದ್ದು ಯಾವ ಕಾರಣಕ್ಕೆ ಎಂದು ಪ್ರಶ್ನೆ ಮಾಡಿದ್ದಾರೆ.

ಈ ಎಲ್ಲದರ ಬಗ್ಗೆ ಹೈಕಮಾಂಡ ಗಮನಕ್ಕೆ ತರಲಾಗುವುದೆಂದು ಶಾಸಕ ಬೆಲ್ಲದ, ಸ್ವತಃ ತಾವೇ ಹೇಳಿದ್ದ ಮುಖ್ಯಮಂತ್ರಿಗಳು ಇದೀಗ ಮತ್ತೆ ಕಡೆಗಣಿಸಿದ್ದಾರೆಂದು ಬೇಸರವ್ಯಕ್ತಪಡಿಸಿದರು.

ನನಗೆ ಮಂತ್ರಿ ಮಾಡದೇ ಅನ್ಯಾಯ ಮಾಡಿದ್ದಾರೆಂದು ಶಾಸಕ ಅರವಿಂದ ಬೆಲ್ಲದರಿಗೆ ಸಂಘಟನಾ ಚತುರ ಎನ್ನುವ ಕಾರಣಕ್ಕೆ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಿದ್ದನ್ನ ಇಲ್ಲಿ ಸ್ಮರಿಸಬಹುದಾಗಿದೆ.

ಶಿಸ್ತಿನ ಪಕ್ಷವೆಂದು ಹೇಳುತ್ತಲೇ ಶಾಸಕರಾಗಿದ್ದ ಅರವಿಂದ ಬೆಲ್ಲದ ಅವರ ಈ ಹೇಳಿಕೆ ಹುಬ್ಬಳ್ಳಿ-ಧಾರವಾಡದ ನಿಷ್ಠಾವಂತ ಕಾರ್ಯಕರ್ತರ ಮೇಲೆ ಅದ್ಯಾವ ರೀತಿಯ ಪರಿಣಾಮ ಬೀರತ್ತೋ ಕಾದು ನೋಡಬೇಕಿದೆ.


Spread the love

Leave a Reply

Your email address will not be published. Required fields are marked *