Exclusive video- ‘ಶಿರಾ-ಸೆರೆ’- ಕುಡಿದು ಓಲಾಡಿದ್ದು ಯಾವ ಪಕ್ಷದವರು ಗೊತ್ತಾ..!
1 min readತುಮಕೂರು: ಜಿಲ್ಲೆಯ ಶಿರಾದಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳು ಗೆಲ್ಲುವುದಕ್ಕೆ ಏನೇನೂ ಬೇಕೋ ಅದನ್ನೇಲ್ಲವನ್ನೂ ಮಾಡುತ್ತಿದ್ದು, ಇಂದು ನಡೆದ ಬಿಜೆಪಿಯ ವಿಜಯ ಸಂಕಲ್ಪ ಸಮಾವೇಶದ ನಂತರ ಹೆಂಡದ ಹೊಳೆಯನ್ನೇ ಹರಿಸಲಾಗಿದೆ.
ವೀಡಿಯೋ ಇಲ್ಲಿದೆ ನೋಡಿ
ಉಪಚುನಾವಣೆಯ ಅಂಗವಾಗಿ ಮದಲೂರಿನಲ್ಲಿ ನಡೆದ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿದ ಜನರಿಗೆ ಟೆಟ್ರ್ಯಾ ಪ್ಯಾಕೇಟಿನ ಮದ್ಯವನ್ನ ವಿತರಣೆ ಮಾಡಲಾಗುತ್ತಿತ್ತು. ಇದನ್ನ ವೀಡಿಯೋ ಮಾಡಲು ಹೋದಾಗ ಅಲ್ಲಿಂದ ಕೆಲವರು ಕಾಲ್ಕಿತ್ತ ಘಟನೆ ನಡೆದಿದೆ.
ವಿಜಯ ಸಂಕಲ್ಪ ಸಮಾವೇಶದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಇನ್ನೂ ಆರು ತಿಂಗಳಲ್ಲಿ ಮದಲೂರು ಕೆರೆಗೆ ಹೇಮಾವತಿ ನೀರು ತಂದು ತುಂಬಿಸುತ್ತೇನೆ ಎಂದು ಭರವಸೆ ನೀಡಿದ ಕೆಲವೇ ನಿಮಿಷಗಳಲ್ಲಿ ಅದೇ ಕೆರೆಯಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಮದ್ಯವನ್ನ ಹಂಚುವ ದೃಶ್ಯಗಳು ವೈರಲ್ ಆಗಿವೆ.
ಹಳ್ಳಿಗಳಿಂದ ಬಸ್ಸು, ಟ್ರ್ಯಾಕ್ಟರ್, ಟಾಟಾ ಏಸ್ ಗಳಲ್ಲಿ ಬಂದಿದ್ದ ಕಾರ್ಯಕರ್ತರಿಗೆ ಮದ್ಯವನ್ನ ನೀಡುತ್ತಿದ್ದಾಗ, ಅದನ್ನ ವೀಡಿಯೋ ಮಾಡುತ್ತಿದ್ದ ಹಾಗೇ ಆ ಜಾಗವನ್ನೂ ಬಿಟ್ಟು ಬೇರೆ ಕಡೆ ಹೋದರು. ಈ ಘಟನೆಯಿಂದ ಶಿರಾ ಚುನಾವಣೆ ಹೇಗೆ ನಡೆಯುತ್ತಿದೆ ಎಂಬುದು ಎಲ್ಲರಿಗೂ ಅರ್ಥವಾಗತ್ತೆ.