Posts Slider

Karnataka Voice

Latest Kannada News

ಲಕ್ಷ್ಮೀಗಾಗಿ ಲಕ್ಷ್ಮೀ ಮಾರಾಟಕ್ಕೀಳಿದ ವಂಚಕರು: ಎಪಿಎಂಸಿ ಠಾಣೆ ಪೊಲೀಸರ ಕಾರ್ಯಾಚರಣೆ

Spread the love

ಹುಬ್ಬಳ್ಳಿ: ಪುರಾತನ ಮೂರ್ತಿಯಂದು ನಂಬಿಸಿ ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡಲು ಹೊಂಚು ಹಾಕುತ್ತಿದ್ದ ತಂಡವನ್ನ ಬಂಧನ ಮಾಡುವಲ್ಲಿ ನವನಗರ ಎಪಿಎಂಸಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.


ಬೈರಿದೇವರಕೊಪ್ಪದ ಬಳಿ ಕಾರಿನಲ್ಲಿ ಪುರಾತನದೆಂದು ಹೇಳಲಾದ ಲಕ್ಷ್ಮೀ ವಿಗ್ರಹವನ್ನ ಮಾರಾಟ ಮಾಡಲು ಯತ್ನಿಸುತ್ತಿದ್ದ ಬಾಗಲಕೋಟೆ, ವಿಜಯಪುರ ಹಾಗೂ ಕಲಬುರಗಿ ಜಿಲ್ಲೆಯ ಆರು ಜನರನ್ನ ಬಂಧನ ಮಾಡಲಾಗಿದೆ.
ಬಂಧಿತರನ್ನ ವಿಜಯಪುರ ಮುಬಾರಕ ಚೌಕ ನಿವಾಸಿ ಹುಸೇನಸಾಬ ಮಳ್ಳಿ, ವಿಜಯಪುರ ಬಬಲೇಶ್ವರ ನಾಕಾದ ಬಾಬು ಜಾಧವ, ಬಾಗಲಕೋಟೆ ಜಿಲ್ಲೆ ರಬಕವಿ ಬನಹಟ್ಟಿ ತಾಲೂಕಿನ ಸಸಾಲಟ್ಟಿ ಗ್ರಾಮದ ಲಕ್ಷ್ಮಣ ಹಾದಿಮನಿ, ಬೆಳಗಾವಿಯ ಬಸವರಾಜ ಮುತಗೇಕರ, ವಿಜಯಪುರ ಆಳಂದದ ಜಳಕಿ ಗ್ರಾಮದ ರಾಜು ಶಿಂಧೆ ಹಾಗೂ ವಿಜಯಪುರ ಝಂಡಾಕಟ್ಟಿಯ ಇರ್ಫಾನ ನಬಿವಾಲೆ ಬಂಧಿತ ಆರೋಪಿಗಳು.
ಬಂಧಿತರಿಂದ ಎರಡು ಕಾರು ಹಾಗೂ ಪುರಾತನದೆಂದು ಹೇಳಲಾದ ವಿಗ್ರಹವನ್ನ ವಶಕ್ಕೆ ಪಡೆಯಲಾಗಿದೆ.
ಎಪಿಎಂಸಿ ಠಾಣೆಯ ಇನ್ಸಪೆಕ್ಟರ್ ಪ್ರಭು ಸೂರಿನ್ ಜೊತೆಗೆ ಪಿಎಸೈ ಎಸ್.ಎಸ್.ಜಕ್ಕನಗೌಡರ, ಸಿಬ್ಬಂದಿಗಳಾದ ವಿಕ್ರಮ ಪಾಟೀಲ, ಎನ್.ಎಚ್.ಗುಡಿಮನಿ, ಕೆ.ಕೆ.ಕಾರಬಾರಿ, ಯು.ವೈ.ಕಾಡಮ್ಮನವರ, ಸಿ.ವೈ.ಬಕ್ಕಸದ, ಶರೀಫ ಶೇಖಬಾಯಿ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನ ಬಂಧಿಸಿದ್ದಾರೆ.


Spread the love

Leave a Reply

Your email address will not be published. Required fields are marked *