Posts Slider

Karnataka Voice

Latest Kannada News

ಧಾರವಾಡ: ಭೀಕರ ರಸ್ತೆ ಅಪಘಾತ, ಪೊಲೀಸ್ ದುರ್ಮರಣ….!!!

1 min read
Spread the love

ಧಾರವಾಡ: ಕರ್ತವ್ಯ ನಿರ್ವಹಿಸಿ ಮರಳಿ ಮನೆಗೆ ಹೋಗುತ್ತಿದ್ದ ಸಮಯದಲ್ಲಿ ಬೈಕ್ ಹಾಗೂ ಕಾರಿನ ನಡುವೆ ಅಪಘಾತವಾಗಿ ಪೊಲೀಸ್‌ನೋರ್ವ ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ಗರಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ.

ಧಾರವಾಡ ಕೇಂದ್ರ ಕಾರಾಗೃಹದಲ್ಲಿ KSISF ಪೇದೆಯಾಗಿದ್ದ  ರುದ್ರಪ್ಪ ಸಿದ್ದಣ್ಣನವರ ಎಂಬುವವರೇ ಘಟನೆಯಲ್ಲಿ ಮೃತಪಟ್ಟಿದ್ದು, ಸ್ವಂತ ಊರಾದ ಬೆಳವಡಿಯಿಂದ ಗರಗದ ಮೂಲಕ ಕರ್ತವ್ಯಕ್ಕೆ ಹಾಜರಾಗಲು ಧಾರವಾಡಕ್ಕೆ ಬರುತ್ತಿದ್ದ  ಸಮಯದಲ್ಲಿ ಘಟನೆ ನಡೆದಿದೆ.

ಘಟನಾ ಸ್ಥಳಕ್ಕೆ ಗರಗ ಠಾಣೆಯ ಪೊಲೀಸರು ತೆರಳಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.


Spread the love

Leave a Reply

Your email address will not be published. Required fields are marked *