Posts Slider

Karnataka Voice

Latest Kannada News

ಕಲಘಟಗಿಯ ಚಳಮಟ್ಟಿ ಬಳಿ ‘112’ ದುರಂತ: ಪೊಲೀಸ್ ಸೇರಿ ಮೂವರ ದುರ್ಮರಣ…

1 min read
Spread the love

ಕಲಘಟಗಿ: ತಾಲೂಕಿನ ಚಳಮಟ್ಟಿ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ 112 ಪೊಲೀಸ್ ವಾಹನಕ್ಕೆ ಲಾರಿಯೊಂದು ಡಿಕ್ಕಿ ಹೊಡೆದು ಪರಾರಿಯಾಗಿದ್ದು, ಓರ್ವ ಪೊಲೀಸ್ ಪೇದೆ ಸೇರಿದಂತೆ ಮೂವರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.

ಸಾಸಾವಿಗೀಡಾದ ಪೊಲೀಸ್ ಪಂಡಿತ ಕಾಸರ

ಚಳಮಟ್ಟಿ ಬಳಿ ಬಿದ್ದಿದ್ದ ಮರವೊಂದನ್ನ ತೆಗೆಯಲು 112 ರಲ್ಲಿ ಜನರನ್ನ ಕರೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ಪೊಲೀಸ್ ಪಂಡಿತ ಕಾಸರ ಸೇರಿದಂತೆ ಮೂವರು ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೇ ಹುಬ್ಬಳ್ಳಿ ಕಿಮ್ಸಗೆ ಪೊಲೀಸ್ ವರುಷ್ಠಾಧಿಕಾರಿ ಪಿ.ಕೃಷ್ಣಕಾಂತ ಹಾಗೂ ಪೊಲೀಸ್ ಕಮೀಷನರ್ ಲಾಬುರಾಮ್ ಭೇಟಿ ನೀಡಿ, ಮಾಹಿತಿಯನ್ನ ಪಡೆದುಕೊಂಡರು.

ಪರಾರಿಯಾಗಿರುವ ಲಾರಿಯ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದು, ಘಟನೆಯಲ್ಲಿ ಇನ್ನೋರ್ವನಿಗೆ ಗಂಭೀರವಾದ ಗಾಯಗಳಾಗಿವೆ.

2017 ರ ಬ್ಯಾಚಿನ ಪಂಡಿತ, ಘಟನೆ ನಡೆಯುವ ಅರ್ಧ ಗಂಟೆಗೆ ಮುನ್ನ ಕರ್ತವ್ಯಕ್ಕೆ ಬಂದಿದ್ದರೆಂದು ಹೇಳಲಾಗಿದೆ.


Spread the love

Leave a Reply

Your email address will not be published. Required fields are marked *