ಧಾರವಾಡ: BRTSನ ಚಿಗರಿ ಬಸ್ಗೆ ಎರಡು ಮಕ್ಕಳ ತಂದೆ ಬಲಿ…

ಧಾರವಾಡ: ಅವಳಿನಗರದ ಮಧ್ಯ ಸಂಚರಿಸುವ ಬಿಆರ್ಟಿಎಸ್ನ ಚಿಗರಿ ಬಸ್ ಬಡಿಗತನ ಮಾಡುವ ವ್ಯಕ್ತಿಯ ಜೀವವೊಂದನ್ನ ಬಲಿ ಪಡೆದಿದ್ದು, ಹೊಟ್ಟೆಯರಸಿ ಬಂದ ಕುಟುಂಬ ದಿಕ್ಕು ತೋಚದಂತಾಗಿದೆ.
ರಾಜಸ್ಥಾನ ಮೂಲದ ವಿಜಯ ದಾನ್ ಎಂಬಾತ ಗೋಪನಕೊಪ್ಪನದಲ್ಲಿ ಮನೆ ಮಾಡಿಕೊಂಡಿದ್ದ. ಜೆಎಸ್ಎಸ್ ಕಾಲೇಜಿನಲ್ಲಿ ಕೆಲಸ ನಡೆಯುತ್ತಿದ್ದರಿಂದ ಇಲ್ಲಿಗೆ ಬಂದು ಮರಳಿ ಹೋಗುತ್ತಿದ್ದಾಗ ಗಾಂಧಿನಗರದಲ್ಲಿ ಚಿಗರಿ ಬಸ್ ಡಿಕ್ಕಿ ಹೊಡೆದಿದೆ.
ಘಟನೆಯ ಮಾಹಿತಿ ಸಿಗುತ್ತಿದ್ದ ಆತನನ್ನ “ಜೆಕೆ”ನ ಅಂಬ್ಯುಲೆನ್ಸ್ ಮೂಲಕ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.