Posts Slider

Karnataka Voice

Latest Kannada News

“ಮಾತಿಗಾಗಿ ನಿಂತ” ಬೈಕ್ ಸವಾರರಿಗೆ ಬೊಲೇರೋ ಡಿಕ್ಕಿ: ಒಬ್ಬ ಸಾವು, ಮತ್ತೋರ್ವ ಗಂಭೀರ..!

1 min read
Spread the love

ಘಟನೆಯಲ್ಲಿ ಶ್ರೀನಿವಾಸ ಜೋಗಣ್ಣನವರ ಎಂಬ 19 ವರ್ಷದ ಯುವಕ ಸಾವಿಗೀಡಾಗಿದ್ದು, ರಾಜು ಫಕ್ಕೀರಪ್ಪ ರಂಗಣ್ಣನವರ ತೀವ್ರವಾಗಿ ಗಾಯಗೊಂಡಿದ್ದಾನೆ.

ನವಲಗುಂದ: ತಾಲೂಕಿನ ಅಮರಗೋಳ ಗ್ರಾಮದ ಬಳಿ ಬೈಕ್ ಸವಾರರಿಬ್ಬರು ಮಾತನಾಡುತ್ತಿದ್ದ ನಿಂತ ಸಮಯದಲ್ಲಿ ಗೂಡ್ಸ್ ಬೊಲೇರೋ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲಿಯೇ ಸಾವಿಗೀಡಾಗಿದ್ದು, ಮತ್ತೋರ್ವನ ಸ್ಥಿತಿ ಗಂಭೀರವಾಗಿದ್ದಾನೆ.

ಶರಣಪ್ಪ ಮಜ್ಜಿಗುಡ್ಡ ಮತ್ತು ಅಜಯ ಗುರುಬಸಣ್ಣನವರ ಅವರಿಗೆ ಸೇರಿದ ಬೈಕಿನಲ್ಲಿ ಮಾತನಾಡುತ್ತಿದ್ದ ನಿಂತಿದ್ದ ಸಮಯದಲ್ಲಿ ವೇಗವಾಗಿ ಬಂದ ಗೂಡ್ಸ್ ಬೊಲೇರೋ ವಾಹನ ಡಿಕ್ಕಿ ಹೊಡೆದು ಪರಾರಿಯಾಗುವ ಯತ್ನ ಮಾಡಿದ್ದು, ನವಲಗುಂದ ಠಾಣೆ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಮೃತ ವ್ಯಕ್ತಿಯನ್ನ ನರಗುಂದ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ತೀವ್ರವಾಗಿ ಗಾಯಗೊಂಡಿರುವ ವ್ಯಕ್ತಿಯನ್ನ ಹುಬ್ಬಳ್ಳಿಯ ಕಿಮ್ಸ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಸ್ಥಳಕ್ಕೆ ತೆರಳಿದ್ದ ನವಲಗುಂದ ಠಾಣೆ ಪಿಎಸ್ಐ ಜಯಪಾಲ ಪಾಟೀಲ ಅವರು ಪರಿಶೀಲನೆ ನಡೆಸಿದ್ದು, ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.


Spread the love

Leave a Reply

Your email address will not be published. Required fields are marked *