ಸಿದ್ಧಾಪುರದ ಬಳಿ ದುರ್ಮರಣ: ಸತ್ತವರೆಲ್ಲರೂ ಹುಬ್ಬಳ್ಳಿಯವರೇ..!
1 min readಹುಬ್ಬಳ್ಳಿ: ನಿನ್ನೆ ಬೆಳಿಗ್ಗೆ ಹುಬ್ಬಳ್ಳಿಯ ಕೇಶ್ವಾಪುರದಲ್ಲಿ ಕಾರ್ ವಾಸಿಂಗ್ ಸೆಂಟರ್ ನಡೆಸುತ್ತಿರುವ ಮಾಲೀಕರ ಕಾರು ತೆಗೆದುಕೊಂಡು ಹೋಗಿದ್ದ ನಾಲ್ವರು ತಡರಾತ್ರಿ ಸಿದ್ಧಾಪುರ ಬಳಿ ಹಳ್ಳದಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ.
ಹುಬ್ಬಳ್ಳಿ ಕೇಶ್ವಾಪುರದ ನಿವಾಸಿಯಾಗಿರುವ ಮಹಾವೀರ ದೇವಕ್ಕಿ ಎನ್ನೋರಿಗೆ ಸೇರಿದ ಕಾರನ್ನ ಪಾಲ್ಸಗೆ ಹೋಗಿ ಬರುತ್ತೇವೆ ಎಂದು ನಿನ್ನೆ ಬೆಳಿಗ್ಗೆ ತೆಗೆದುಕೊಂಡು ಹೋಗಿದ್ದ,ಇಬ್ಬರು ಯುವಕರು ಮತ್ತು ಇಬ್ಬರು ಯುವತಿಯರೇ ಸಿದ್ಧಾಪುರ ತಾಲೂಕಿನ ಹೆಗ್ಗರಣಿ ಕೋಡನಮನೆ ಬಳಿಯ ಹಳ್ಳದಲ್ಲಿ ಕಾರು ಸಮೇತ ಬಿದ್ದು ಸಾವಿಗೀಡಾಗಿದ್ದಾರೆ.
ವೃತ್ತಿಯಲ್ಲಿ ಚಾಲಕನಾಗಿರುವ ಕೇಶ್ವಾಪುರ ನಿವಾಸಿ ನಿಶ್ಚಿಲ ಹಿರೇಮಠ, ಬೆಂಗಳೂರು ಮೂಲದ ಹುಬ್ಬಳ್ಳಿ ಕೆಎಲ್ ಇ ಕಾಲೇಜಿನ ಬಿಇ ವಿದ್ಯಾರ್ಥಿ ರೋನಿತ, ವಿದ್ಯಾನಗರದ ಅಕ್ಷತಾ ಹಿರೇಮಠ ಹಾಗೂ ಸುಶ್ಮೀತಾ ಕಾರಲ್ಲಿ ಹೋಗಿದ್ದರೆಂದು ನಿಶ್ಚಿಲ ಹಿರೇಮಠನ ಸಹೋದರ ಅಭಿ ಹಿರೇಮಠ ತಿಳಿಸಿದ್ದಾರೆ.
ಈಗಾಗಲೇ ಒಂದು ಹುಡುಗಿ ಮತ್ತು ಇಬ್ಬರು ಹುಡುಗರ ಶವ ದೊರಕಿದ್ದು, ಇನ್ನೊಂದು ಹುಡುಗಿಯ ಶವಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ. ಉಚ್ಚಂಳಿ ಪಾಲ್ಸ್ ನೋಡಲು, ದೇವಕ್ಕಿ ಎಂಬುವವರಿಂದ ಕಾರು ತೆಗೆದುಕೊಂಡು ಹೋಗಿದ್ದ ನಿಶ್ಚಿಲ ಹಿರೇಮಠ.