Karnataka Voice

Latest Kannada News

ರಾಯಚೂರು: ಆತಂಕ ಮೂಡಿಸಿದ ಶಾಸಕರ ಕಾರು: ಮುಂದೆ ಶಾಸಕ-ಹಿಂದೆ ಪ್ರೆಸ್.. ಏನಿದು ಮರ್ಮ..!

ರಾಯಚೂರು: ಕಳೆದ ಐದು ಗಂಟೆಯಿಂದಲೂ ಜಿಲ್ಲಾಧಿಕಾರಿ ಕಚೇರಿ ಎದುರು ನಂಬರ್ ಪ್ಲೇಟ್ ಇಲ್ಲದ ಶಾಸಕರ ಕಾರೊಂದು ನಿಂತಿದ್ದು, ಇದು ಇಲ್ಯಾಕೆ ನಿಂತಿದೆ ಮತ್ತೂ ಯಾರದ್ದು ಈ ಕಾರು ಎಂಬ ಸಂಶಯದ ಆತಂಕ ಮನೆ ಮಾಡಿದೆ.

ಸಾರ್ವಜನಿಕರು ಈ ಕಾರು ನಿಂತಿರುವ ಪ್ರದೇಶದಲ್ಲಿ ಸಂಶಯದಿಂದ ನೋಡುತ್ತಿದ್ದು, ಇದು ಕೊಪ್ಪಳ ಜಿಲ್ಲೆಯ ಗಂಗಾವತಿ ವಿಧಾನ ಸಭಾ ಕ್ಷೇತ್ರದ ಶಾಸಕ ಪರಣ್ಣ ಮುನವಳ್ಳಿ ಕಾರ್ ಎಂದು ಹೇಳಲಾಗುತ್ತಿದೆ. ಕಳೆದ ಐದು ಗಂಟೆಗಳಿಂದ ರಾಯಚೂರು ಜಿಲ್ಲಾಧಿಕಾರಿ ಕಛೇರಿ ಮುಂದೆ ನಿಂತಿರುವ ಈ ಕಾರಿಗೆ ನಂಬರ್ ಪ್ಲೇಟ್ ಕೂಡ ಇಲ್ಲದಿರುವುದು ಮತ್ತಷ್ಟು ಅನುಮಾನವನ್ನುಂಟು ಮಾಡಿದೆ.

ಇನ್ನೋವ್ವಾ  ಕ್ರಿಷ್ಟ್ ಕಾರ್ ಗೆ ಮುಂಬಾಗದಲ್ಲಿ ಶಾಸಕ ಪರಣ್ಣ ಮನವಳ್ಳಿ ಅವರ ಪಾಸ್, ಹಿಂದೆ ಪ್ರೆಸ್ ಬೋರ್ಡ್ ಹಾಕಲಾಗಿದೆ. ಆದರೆ ನಂಬರ್ ಪ್ಲೇಟ್ ಇಲ್ಲವೇ ಇಲ್ಲ. ಹೀಗೆ ಅನಾಥವಾಗಿ ನಿಂತಿರುವ ಕಾರು ಶಾಸಕರದ್ದಾ ಅಲ್ವಾ ಎಂಬುದು ಯಕ್ಷಪ್ರಶ್ನೆಯಾಗಿದೆ.

ಶಾಸಕರ ಕಾರು ಆಗಿದ್ದರೇ ಮುಂದೆ ಶಾಸಕರು, ಹಿಂದೆ ಪ್ರೆಸ್ ಎಂದು ಯಾಕೆ ಹಾಕಿಸಿಕೊಳ್ಳುತ್ತಿದ್ದರು. ಯಾರಾದರೂ ಈ ಕಾರನ್ನ ದುರುಪಯೋಗ ಮಾಡಿಕೊಳ್ಳುತ್ತಿದ್ದಾರಾ ಎಂಬುದನ್ನ ಕೂಡಾ ಪೊಲೀಸರು ತನಿಖೆ ಮಾಡಬೇಕಿದೆ.

Leave a Reply

Your email address will not be published. Required fields are marked *