Posts Slider

Karnataka Voice

Latest Kannada News

ಬರ್ತಡೇ ದಿನವೇ “ಕೊನೆಯಾಟ”: ಖ್ಯಾತ ಕಲಾವಿದ ಬಾರದ ಲೋಕಕ್ಕೆ

1 min read
Spread the love

ಹುಬ್ಬಳ್ಳಿ: ಕನ್ನಡ ಚಿತ್ರರಂಗದ ಪೋಷಕ ಪಾತ್ರಗಳಲ್ಲಿ ಮಿಂಚಿ ಉತ್ತರ ಕರ್ನಾಟಕದ ಕೀರ್ತಿಯನ್ನ ಹೆಚ್ಚಿಸುತ್ತಿದ್ದ ಕಲಾವಿದ ಸಿದ್ದರಾಜು ಕಲ್ಯಾಣಕರ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಹುಬ್ಬಳ್ಳಿ ನವನಗರದ ನಿವಾಸಿಯಾಗಿದ್ದ ಸಿದ್ಧರಾಜು ಕಲ್ಯಾಣಕರ ಉಪೇಂದ್ರ ಸಿನೇಮಾಗಳಲ್ಲಿ ಫಿಕ್ಸ್ ಆ್ಯಕ್ಟರ್ ಆಗಿದ್ದರು. ಸುಮಾರು 70 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಸಿದ್ಧರಾಜು ಅಭಿಮಾನಿ ಬಳಗವನ್ನ ಅಗಲಿದ್ದಾರೆ.
ತಮ್ಮ 60ನೇ ಜನ್ಮದಿನವನ್ನು ಪ್ರೇಮಲೋಕ ಸೀರಿಯಲ್ ತಂಡದೊಂದಿಗೆ ನಿನ್ನೆ ಆಚರಿಸಿಕೊಂಡಿದ್ದರು. ರಾತ್ರಿಯವರೆಗೂ ಆರಾಮಾಗಿದ್ದ ಅವರು, ರಾತ್ರಿ ತಮ್ಮ ಜನ್ಮದಿನ ಸಂಭ್ರಮದ ಫೋಟೋ ಸಹ ಫೇಸ್‌ಬುಕ್‌ಗೆ ಅಪಲೋಡ್ ಮಾಡಿ, ಊಟ ಮಾಡಿದ್ದರು. ಊಟ ಮಾಡಿದ ಬಳಿಕ ಎದೆನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲು ಆಸ್ಪತ್ರೆಗೆ ಹೋಗುವಾಗ ಮಾರ್ಗಮಧ್ಯೆದಲ್ಲೇ ಹೃದಯಾಘಾತದಿಂದ ನಿಧನರಾಗಿದ್ದಾರೆ.


ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದ ಅವರು, ಮೊದಲ ಚಿತ್ರ ಪತೀತ ಪಾವನಿ ಸಿನೆಮಾದಲ್ಲಿ ಇವರ ನಟನೆ ನೋಡಿ ಯಾರೇ ನೀ ಅಭಿಮಾನಿ ಅವಕಾಶ ನೀಡಲಾಗಿತ್ತು. ನಂತರ ಬುದ್ಧಿವಂತ, ಸೂಪರ, ಹೃದಯ ಹೃದಯ, ಶ್ರೀಮಂಜುನಾಥ ಸೇರಿದಂತೆ 70ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು.
ಸದ್ಯ ಕಿರುತೆರೆಯಲ್ಲಿ ಬರುತ್ತಿರುವ
ಪ್ರೇಮಲೋಕ ಮತ್ತು ಗಿಣಿರಾಮ್ ಚಿತ್ರದಲ್ಲಿ ಪ್ರಧಾನ ಪಾತ್ರ ನಿರ್ವಹಿಸುತ್ತಿದ್ದರು.

ಇವರಿಗೆ ಪತ್ನಿ, ಇಬ್ಬರು ಪುತ್ರರಿದ್ದಾರೆ. ಈಗಾಗಲೇ ಸಿದ್ಧರಾಜು ಅವರ ಪಾರ್ಥಿವ ಶರೀರವನ್ನ ನವನಗರಕ್ಕೆ ತರಲಾಗುತ್ತಿದ್ದು, ಮನೆಗೆ ಬಂದ ನಂತರ ಸಮಯ ನಿಗದಿ ಮಾಡಿ, ನವನಗರದ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಸಲಿದ್ದಾರೆ.


Spread the love

Leave a Reply

Your email address will not be published. Required fields are marked *