Karnataka Voice

Latest Kannada News

ಶಿವಾನಂದ ಮುತ್ತಣ್ಣನವರ ಮೇಲೆ ಪ್ರಕರಣ: ರಾಜ್ಯೋತ್ಸವದಂದು ಏನು ಮಾಡಲು ಹೊರಟಿದ್ದರು ಗೊತ್ತಾ..!

ಹುಬ್ಬಳ್ಳಿ: ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಹಾಗೂ ಭಾರತೀಯ ಜನತಾ ಪಕ್ಷದಿಂದ ಉಚ್ಚಾಟನೆಗೊಂಡಿರುವ ಶಿವಾನಂದ ಮುತ್ತಣ್ಣನವರ ಮೇಲೆ ಮಹಾನಗರ ಪಾಲಿಕೆ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಇನ್ನೇನು ಕೆಲವೇ ಸಮಯದಲ್ಲಿ ಪ್ರಕರಣ ದಾಖಲಾಗುವ ಸಾಧ್ಯತೆಯಿದೆ.

ಗಬ್ಬೂರ ಬೈಪಾಸ್ ನಲ್ಲಿದ್ದ ಡಾ.ರಾಜಕುಮಾರ ಭಾವಚಿತ್ರದ ನಾಮಫಲಕವನ್ನ ಬದಲಾವಣೆ ಮಾಡಿ, ಅದನ್ನ ಚೌಕಾರದಲ್ಲಿ ಬದಲಾವಣೆ ಮಾಡಲಾಗಿದೆ. ಅಷ್ಟೇ ಅಲ್ಲ, ಅಲ್ಲಿಯೇ ಗೋಡೆ ಎಬ್ಬಿಸಲು ಮುಂದಾದ ಪರಿಣಾಮ ಸ್ಥಳೀಯರು ಇದಕ್ಕೆ ವಿರೋಧವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು ಶಿವಾನಂದ ಮುತ್ತಣ್ಣನವರ ಮೇಲೆ ಪ್ರಕರಣ ದಾಖಲು ಮಾಡುವಂತೆ ಕಸಬಾಪೇಟೆ ಠಾಣೆಯಲ್ಲಿ ದೂರು ನೀಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ದೂರನ್ನ ಸ್ವೀಕರಿಸಿರುವ ಪೊಲೀಸರು ಇನ್ನೇನು ಕೆಲವೇ ಸಮಯದಲ್ಲಿ ಪ್ರಕರಣವನ್ನ ದಾಖಲಿಸಿಕೊಳ್ಳಲಿದ್ದಾರಂತೆ. ಗಬ್ಬೂರ ಬೈಪಾಸ್ ಬಳಿಯಿರುವ ವೃತ್ತಕ್ಕೆ ಈಗಾಗಲೇ ಬೇರೆಯದ್ದೇ ಹೆಸರಿದ್ದು, ಅದನ್ನು ತಿರುಚುವ ಯತ್ನ ನಡೆತಿದೆ ಎಂದು ಕೆಲವರು ಪಾಲಿಕೆಗೆ ದೂರು ನೀಡಿದ್ದರಂತೆ.

ಈಗಾಗಲೇ ನಿರ್ಮಾಣವಾಗುತ್ತಿದ್ದ ಗೋಡೆಯನ್ನ ತೆಗೆದು ಹಾಕಲಾಗಿದ್ದು, ಪ್ರಕರಣ ಬೇರೆ ಸ್ವರೂಪ ಪಡೆಯಬಾರದೆಂದು ಮಹಾನಗರ ಪಾಲಿಕೆ ದೂರನ್ನ ನೀಡಿದೆ ಎಂದು ಹೇಳಲಾಗುತ್ತಿದೆ.

Leave a Reply

Your email address will not be published. Required fields are marked *