Karnataka Voice

Latest Kannada News

ಬಿಜೆಪಿ ಮುಖಂಡರ ಮಗ ಮನೆಯಲ್ಲೇ ನೇಣಿಗೆ ಶರಣು

ಧಾರವಾಡ: ಭಾರತೀಯ ಜನತಾ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿದ್ದ ಯುವಕನೋರ್ವ ತನ್ನದೇ ಮನೆಯಲ್ಲಿ ನೇಣಿಗೆ ಶರಣಾದ ಘಟನೆ ಧಾರವಾಡದ ಗಾಂಧಿಚೌಕದ ಸಮೀಪದ ಮನೆಯಲ್ಲಿ ನಡೆದಿದೆ.


ಮೃತ ಯುವಕನನ್ನ ಕಾರ್ತಿಕ ಕಾಟಕರ ಎಂದು ಗುರುತಿಸಲಾಗಿದ್ದು, ಪಾಲಕರೊಂದಿಗೆ ಬಿಜೆಪಿಯಲ್ಲಿ ಸಕ್ರಿಯನಾಗಿದ್ದ ವಿದ್ಯಾರ್ಥಿ. ಮನೆಯವರು ಹೊರಗಡೆ ಹೋದಾಗ ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದು, ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.


ಈ ಕುರಿತು ಧಾರವಾಡ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾವಿನ ಬಗ್ಗೆ ನಿಖರವಾದ ಕಾರಣವೇನು ಎಂಬುದನ್ನ ತಿಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ಮೃತನ ಶವವನ್ನ ಮರಣೋತ್ತರ ಪರೀಕ್ಷೆಗಾಗಿ ಸಿವಿಲ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

Leave a Reply

Your email address will not be published. Required fields are marked *