ಧಾರವಾಡ: ಎದೆ ಝಲ್ ಅನಿಸೋ ವೀಡಿಯೋ… ಆತನ ಜೀವ ಉಳಿದಿದ್ದೆ ಸೋಜಿಗ… ಭಯಾನಕ… ವಿಚಿತ್ರ…!!!
ಧಾರವಾಡ: ಇಂತಹ ದೃಶ್ಯಗಳನ್ನು ನೋಡಲು ಮನಸ್ಸು ಗಟ್ಟಿಯಾಗಿರಬೇಕು. ದುರ್ಬಲ ಹೃದಯದವರು ಈ ವೀಡಿಯೋವನ್ನು ವೀಕ್ಷಿಸದಿರುವುದು ಒಳಿತು. ಧಾರವಾಡದಲ್ಲಿ ನಡೆದಿರುವ ಈ ಘಟನೆ ನಿಜಕ್ಕೂ ಬೆಚ್ಚಿಬೀಳಿಸುವಂತಿದೆ.
ಧಾರವಾಡದ ಸಂಗಮ ವೃತ್ತದ ಬಾರ್ವೊಂದರ ಮುಂದೆ ನಡೆದ ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕುಡಿದು ರಸ್ತೆಯಲ್ಲಿ ಬಿದ್ದಿದ್ದ ಯುವಕನಿಗೆ ಶ್ವಾನಗಳ ಗುಂಪು ದಾಳಿ ಮಾಡಿರುವ ದೃಶ್ಯಗಳು ಭಯಾನಕವಾಗಿವೆ.

ಮಾಹಿತಿಯ ಪ್ರಕಾರ, ಯುವಕ ಕುಡಿದ ಅಮಲಿನಲ್ಲಿ ಬಿದ್ದು ಗಾಯಗೊಂಡು ಪ್ರಜ್ಞೆ ಕಳೆದುಕೊಂಡಿದ್ದಾನೆ. ಈ ವೇಳೆ ಅಲ್ಲಿಗೆ ಬಂದ ಶ್ವಾನಗಳು ಆತನ ಮೇಲೆ ದಾಳಿ ನಡೆಸಿವೆ ಎನ್ನಲಾಗಿದೆ.
ಘಟನೆಯ ವೀಡಿಯೋವನ್ನು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದು, ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.
ಘಟನೆ ಕಳೆದ ಮಂಗಳವಾರ ನಡೆದಿದ್ದು, ಪೊಲೀಸರು ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನಲಾಗಿದೆ. ಯುವಕ ಬದುಕುಳಿದಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ, ಆತ ಚಿಕಿತ್ಸೆ ಪಡೆಯುತ್ತಿದ್ದ ಕಿಮ್ಸ್ನಿಂದ ಬಳಿಕ ಪರಾರಿಯಾಗಿದ್ದಾನೆ ಎನ್ನಲಾಗಿದ್ದು, ಈ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ಆ ದೃಶ್ಯವನ್ನ ನೋಡುವ ಧೈರ್ಯ ನಿಮಗಿದ್ದರೇ ಕರ್ನಾಟಕವಾಯ್ಸ್.ಕಾಂ ಬಳಿ ವೈರಲ್ ವೀಡಿಯೋ ಲಭ್ಯವಿದ್ದು 9916152051 ಸಂಖ್ಯೆಗೆ ವಾಟ್ಸಾಫ್ ಮಾಡಿದ್ರೇ, (ಕಾಲ್ ಮಾಡಬೇಡಿ) ನಿಮಗೆ ಈ ವೈರಲ್ ವೀಡಿಯೋ ಸಿಗಲಿದೆ.
ಈ ವೀಡಿಯೋವನ್ನ ಸಂಬಂಧಿಸಿದ ಮಹಾನುಭಾವರಿಗೆ ತೋರಿಸಿ, ಜನರ ಪ್ರಾಣ ಉಳಿಸಿ.
