ಧಾರವಾಡದ “ಐನೋಕ್ಸ್” ಹತ್ತಿರ ಯುವಕನ ಕೊಲೆ… ಪೊಲೀಸರು ಸ್ಥಳಕ್ಕೆ…!!!
ಧಾರವಾಡ: ಯುವಕನೋರ್ವನ್ನನ ಹರಿತವಾದ ಆಯುಧದಿಂದ ಹೊಡೆದು ಕೊಲೆ ಮಾಡಿರುವ ಪ್ರಕರಣ ಟೋಲನಾಕಾದ ಬಳಿಯ ಐನೊಕ್ಸ್ ಪಕ್ಕದ ಖಾಲಿ ಜಾಗದಲ್ಲಿ ಸಂಭವಿಸಿದ್ದು, ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.

ಕೊಲೆಯಾಗಿರುವ ಯುವಕನನ್ನ ಲಕ್ಷ್ಮೀಸಿಂಗನಕೇರಿಯ 25ವರ್ಷದ ಹನಮಂತಪ್ಪ ರಾಮಣ್ಣ ಅಣ್ಣಿಗೇರಿ ಎಂದು ಗುರುತಿಸಲಾಗಿದ್ದು, ಯಾವ ಸಮಯದಲ್ಲಿ ಘಟನೆ ನಡೆದಿದೆ ಎಂಬುದು ನಿಖರವಾಗಿ ತಿಳಿದು ಬಂದಿಲ್ಲ.
ಸ್ಥಳಕ್ಕೆ ವಿದ್ಯಾಗಿರಿ ಠಾಣೆಯ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
