“ಹುಬ್ಬಳ್ಳಿ ಕಾಮಗಾರಿ” ಗುತ್ತಿಗೆದಾರ ಓಡಿ ಹೋಗಿದ್ದಾನೆ, ಅನುಭವಿಸಬೇಕಷ್ಟೇ: ಸಚಿವ ಸಂತೋಷ ಲಾಡ್ ಹೇಳಿದ ಸತ್ಯ..!!!
ಹುಬ್ಬಳ್ಳಿ: ನಗರದ ಹೃದಯ ಭಾಗದಲ್ಲಿ ನಡೆಯುತ್ತಿರುವ ಕಾಮಗಾರಿಯ ವೇಳೆಯಲ್ಲಿ ಎಎಸ್ಐವೊಬ್ಬರು ತೀರಿಕೊಂಡ ನಂತರ ಗುತ್ತಿಗೆದಾರನ ಮೇಲೆ ಪ್ರಕರಣ ದಾಖಲಾಗಿದ್ದರಿಂದ ಆತ ಇಲ್ಲಿ ಬರಲೇ ಇಲ್ಲ. ಓಡಿ ಹೋಗಿದ್ದಾನೆ, ಇದೇ ಸತ್ಯ ಎಂದು ಸಚಿವ ಸಂತೋಷ ಲಾಡ್ ಹೇಳಿದರು.
ಸಚಿವರಾದ ನಂತರ ಹುಬ್ಬಳ್ಳಿಗೆ ಬಂದಿದ್ದ ಸಂತೋಷ ಲಾಡ್ ಅವರು, ಸತ್ಯವನ್ನ ಬಿಚ್ಚಿಟ್ಟರು.
ಇಲ್ಲಿ ಪಕ್ಷಗಳ ಬಗ್ಗೆ ಮಾತನಾಡುವುದು ಅಲ್ಲ. ಆಗಿರುವ ನಿಜವನ್ನ ಅರ್ಥ ಮಾಡಿಕೊಳ್ಳಬೇಕಿದೆ. ಗುತ್ತಿಗೆದಾರನಿಗಾಗಿ ನಾವೂ ಮತ್ತು ಅವರು ಕೂಡಾ ಪ್ರಯತ್ನಿಸಿದ್ದೇವೆ ಎಂದರು.
