Karnataka Voice

Latest Kannada News

“KSCA U-19” ಧಾರವಾಡ ವಲಯಕ್ಕೆ “ಸುಜಯ ಕೊರವರ ನಾಯಕ”- ಕಠಿಣ ಪರಿಶ್ರಮಕ್ಕೆ ದೊರೆತ ಮೊದಲ ಪ್ರಾಶಸ್ತ್ಯ…

Spread the love

ಕೆಎಸ್‌ಸಿಎ ಧಾರವಾಡ ವಲಯ ಯು-19 ತಂಡ ಪ್ರಕಟ

ಸುಜಯ್ ಕೊರವರಗೆ ನಾಯಕತ್ವ, ಅಶುತೋಷ್ ಹಿರೇಮಠಗೆ ಉಪನಾಯಕ ಸ್ಥಾನ

ಹುಬ್ಬಳ್ಳಿ: 2026–27ನೇ ಸಾಲಿನ ಬೆಂಗಳೂರಿನಲ್ಲಿ ನಡೆಯಲಿರುವ ಇಂಟರ್ ಜೋನಲ್ಸ್ ಕ್ರಿಕೆಟ್ ಟೂರ್ನಮೆಂಟ್‌ಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಧಾರವಾಡ ವಲಯದ 19 ವರ್ಷದೊಳಗಿನವರ ತಂಡವನ್ನು ಅಧಿಕೃತವಾಗಿ ಪ್ರಕಟಿಸಿದೆ.

ತಂಡದ ನಾಯಕರಾಗಿ ಸುಜಯ್ ಕೊರವರ ಹಾಗೂ ಉಪನಾಯಕರಾಗಿ ಅಶುತೋಷ್ ಡಿ. ಹಿರೇಮಠ ಆಯ್ಕೆಯಾಗಿದ್ದಾರೆ. ತಂಡದ ಕೋಚ್ ಆಗಿ ಮಿಲಿಂದ್ ಚವ್ಹಾಣ್ ಮತ್ತು ಮ್ಯಾನೇಜರ್ ಆಗಿ ವಿಠ್ಠಲ ಹಬೀಬ್ ಕಾರ್ಯನಿರ್ವಹಿಸಲಿದ್ದಾರೆ.

ಆಯ್ಕೆಯಾದ ಆಟಗಾರರು:
ಸುಜಯ್ ಕೊರವರ (ನಾಯಕ), ಅಶುತೋಷ್ ಡಿ. ಹಿರೇಮಠ (ಉಪನಾಯಕ), ಆಯುಷ್ ಎಂ. ಪಾಟೀಲ್, ವ್ರತೀನ್ ಪ್ರಶಾಂತ್ ಪಡ್ತಿ, ಅರ್ನವ್ ಕುಂದಾಪ್, ಮೊಹಮ್ಮದ್ ಝೈದ್ ಅತ್ತಾರ್, ಸಂಕೇತ್ ಶೆಟ್ಟಿ, ಸಾಯಿನಾಥ್ ರಜೋಳಿ, ಪೃಥ್ವಿ ಕರ್ಜಗಿ, ಸೋಹಂ ಬಿ. ಪಾಟೀಲ್, ವಿನಾಯಕ್ ನೆಲ್ಲೂರು, ಸಂಪತ್‌ಕುಮಾರ್ ಹೆಚ್. ಬೇವೂರ್, ಹರ್ಷಿತ್‌ಗೌಡ ತೋಟದ, ಹರ್ಷಿತ್ ಆರ್. ಶಿವಪುರ ಹಾಗೂ ಆರವ್ ಓಸ್ವಾಲ್.

ಮೀಸಲು ಆಟಗಾರರು:
ಪವನ್ ಆರ್. ಶೇಲ್ಕೆ, ಅಭಿನವ್ ಶರ್ಮಾ, ಲಾಭ್ ಎಸ್. ವೆರ್ಣೇಕರ್, ವಿಶ್ವೇಶ್ ಎಸ್. ಅಲಗುಂಡಗಿ ಹಾಗೂ ಲಕ್ಷ್ಯ ಶಾ.

ಈ ಕುರಿತು ಕೆಎಸ್‌ಸಿಎ ಧಾರವಾಡ ವಲಯದ ಅಧ್ಯಕ್ಷ ಅಲ್ತಾಫ್ ಕಿತ್ತೂರ ಹಾಗೂ ಸಂಚಾಲಕ ವೀರಣ್ಣ ಸವಡಿ ಅವರು ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಆಯ್ಕೆಯಾದ ಆಟಗಾರರಿಗೆ ಶುಭಾಶಯಗಳನ್ನು ಕೋರಿದ್ದಾರೆ.

ತಂಡದ ನಾಯಕತ್ವ ವಹಿಸಿರುವ ಸುಜಯ, ಹೋರಾಟಗಾರ ಬಸವರಾಜ ಕೊರವರ ಅವರ ಪುತ್ರನಾಗಿದ್ದು, ನಿರಂತರವಾಗಿ ನಡೆಯುತ್ತಿದ್ದ ಪರಿಶ್ರಮಕ್ಕೆ ಫಲ ದೊರಕಿದೆ. ಮಗನ ಏಳಿಗೆಗಾಗಿ ತಂದೆ-ತಾಯಿ ಕೂಡಾ ಅಷ್ಟೇ ತಾಳ್ಮೆಯಿಂದ ಸಹಕಾರ ಕೊಡುತ್ತಿದ್ದಾರೆ. ಪುತ್ರನ ಬೆಳವಣಿಗೆ ಅವರಲ್ಲೂ ಸಂತಸ ಮೂಡಿಸಿದೆ.


Spread the love

Leave a Reply

Your email address will not be published. Required fields are marked *