Karnataka Voice

Latest Kannada News

ಪತಿಯ ಶವದ ಜೊತೆ 10 ಗಂಟೆ ಕಳೆದ ಡಾಕ್ಟರಮ್ಮಾ- ಈ ಹಿಂದೆಯೂ ಗಂಡನನ್ನ ಹೊಡೆಯುತ್ತಿದ್ದಳಂತೆ: ಹೌಹಾರುವ ರಹಸ್ಯ ಬಿಚ್ಚಿಟ್ಟ ಸಂಬಂಧಿ…

Spread the love

ಧಾರವಾಡ: ಡಾ. ಕಿರಣ್ ಅವರ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪತ್ನಿ ಡಾ. ಪ್ರಿಯಾಂಕಾ ಅವರ ಮೇಲೆಯೇ ಕೊಲೆ ಶಂಕೆ ವ್ಯಕ್ತವಾಗಿದ್ದು, ಘಟನೆಯ ಸುತ್ತ ಹಲವು ಅನುಮಾನಗಳು ದಟ್ಟವಾಗಿವೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಡಾ. ಕಿರಣ್ ಅವರ ಸಂಬಂಧಿ ಶಾಂತಿನಾಥ್, ಪ್ರಿಯಾಂಕಾ ಅವರೇ ಈ ಕೃತ್ಯ ಎಸಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

“ಡಾ. ಕಿರಣ್ ಮೃತಪಟ್ಟ ನಂತರ ಪತ್ನಿ ಪ್ರಿಯಾಂಕಾ ಆತನ ಶವದ ಜೊತೆಗೆ ಸುಮಾರು ಹತ್ತರಿಂದ ಹನ್ನೊಂದು ಗಂಟೆಗಳ ಕಾಲ ಸಮಯ ಕಳೆದಿದ್ದಾಳೆ. ಕಣ್ಣೆದುರೇ ಮಗು ಬಿದ್ದಿದ್ದರೂ ಅವಳು ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಹಾಗೇ ಇದ್ದಾಳೆ. ಆಕೆಯ ವರ್ತನೆಯನ್ನು ನೋಡಿದರೆ ಈ ಕೊಲೆಯನ್ನು ಅವಳೇ ಮಾಡಿದ್ದಾಳೆ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ” ಎಂದು ಶಾಂತಿನಾಥ್ ಆಕ್ರೋಶ ಹೊರಹಾಕಿದ್ದಾರೆ.

ಘಟನೆಯ ದಿನದ ಬಗ್ಗೆ ಮತ್ತಷ್ಟು ಮಾಹಿತಿ ಹಂಚಿಕೊಂಡ ಅವರು, “ನಾವು ಮನೆಗೆ ಹೋದಾಗ ಬಾಗಿಲನ್ನು ಅವಳೇ ಬಂದು ತೆಗೆದಳು. ತಕ್ಷಣ ಕಿರಣ್ ಎಲ್ಲಿದ್ದಾನೆ ಎಂದು ನಾವು ಪ್ರಶ್ನಿಸಿದಾಗ, ಆತ ಪಕ್ಕದ ರೂಮ್‌ನಲ್ಲಿ ಮಲಗಿದ್ದಾನೆ ಎಂದು ಡಾ. ಪ್ರಿಯಾಂಕಾ ಅತ್ಯಂತ ಸಹಜವಾಗಿ ಸುಳ್ಳು ಹೇಳಿದ್ದಾಳೆ” ಎಂದು ತಿಳಿಸಿದ್ದಾರೆ.

​ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಡಾ. ಪ್ರಿಯಾಂಕಾ ಅವರ ನಡೆ ಹಾಗೂ ಹೇಳಿಕೆಗಳು ಪ್ರಕರಣಕ್ಕೆ ಹೊಸ ತಿರುವು ನೀಡುವ ಸಾಧ್ಯತೆಯಿದೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಹೇಳಿಕೆ ನೀಡಿದ್ದು, ಡಾ.ಕಿರಣ ಅವರನ್ನ ಪತ್ನಿ ಡಾ.ಪ್ರಿಯಾಂಕಾ ಹೊಡೆಯುತ್ತಿದ್ದರಂತೆ ಎಂದು ಸಂಬಂಧಿಗಳು ದೂರು ನೀಡಿದ್ದಾರೆಂದು ಹೇಳಿದರು.


Spread the love

Leave a Reply

Your email address will not be published. Required fields are marked *

You may have missed