ಸತ್ತ ಮನುಷ್ಯತ್ವ, ಮೈ ಜುಂ ಎನಿಸುವ ದೃಶ್ಯ. ಉಸಿರು ನಿಲ್ಲಿಸಿದ ಪತಿ, ಉಸಿರಿಗಾಗಿ ಪರದಾಡುತ್ತಿದ್ದ ಮಗ, ಮೊಬೈಲ್ ನೋಡುತ್ತ ಬೆಡ್ ಮೇಲೆ ಹಾಯಾಗಿ ಒರಗಿದ್ದ “ಡಾಕ್ಟರ್ಮ್ಮಾ”
ಧಾರವಾಡ: ಮನಸ್ಸು ಕಲ್ಲಾಗಿತ್ತೋ ಅಥವಾ ಮನುಷ್ಯತ್ವವೇ ಸತ್ತುಹೋಗಿತ್ತೋ ಗೊತ್ತಿಲ್ಲ… ಆದರೆ ಅಲ್ಲಿ ನಡೆದ ಆ ದೃಶ್ಯ ಮಾತ್ರ ಇಡೀ ಸಮಾಜವೇ ತಲೆತಗ್ಗಿಸುವಂತೆ ಮಾಡಿದೆ, ಎದೆ ನಡುಗಿಸುವಂತಿದೆ!
ಪೊಲೀಸ್ ಮೂಲಗಳು ನೀಡಿದ ಆ ಒಂದು ಮಾಹಿತಿ ಕೇಳಿದರೆ ಮೈಯೆಲ್ಲಾ ಉರಿಯುತ್ತದೆ, ಕಣ್ಣಾಲಿಗಳು ತೇವವಾಗುತ್ತವೆ. ತನು-ಮನವನ್ನೇ ನಂಬಿ ಜೊತೆಯಾಗಿದ್ದ ಪತಿ ಕಿರಣ್ನನ್ನು ಅಪಾರ್ಟ್ಮೆಂಟ್ನ ಒಂದು ಕೋಣೆಯಲ್ಲಿ ಚಾಕುವಿನಿಂದ ಮನಬಂದಂತೆ ಇರಿದು, ರಕ್ತದ ಹನಿ ಹನಿಯೂ ನೆಲಕ್ಕೆ ಚೆಲ್ಲುವಂತೆ ಅಮಾನುಷವಾಗಿ ಕೊಲೆ ಮಾಡಲಾಗಿದೆ.
ಮತ್ತೊಂದು ಕೋಣೆಯಲ್ಲಿ ಸ್ವಂತ ರಕ್ತ, ಹೆತ್ತ ಮಗ ನೇಹಿತ್ಗೆ ಚಾಕುವಿನಿಂದ ಇರಿದು ಹಾಕಲಾಗಿದೆ. ಆ ಎಳೆಜೀವ ತಾನು ಹೆತ್ತ ತಾಯಿಯ ಎದುರೇ ರಕ್ತದ ಮಡುವಿನಲ್ಲಿ ಬಿದ್ದು, ಉಸಿರಿಗಾಗಿ… ಬದುಕಿ ಉಳಿಯುವುದಕ್ಕಾಗಿ ಸಾವು-ಬದುಕಿನ ನಡುವೆ ನರಳಿ ನರಳಿ ಹೋರಾಡುತ್ತಿದೆ. ಆದರೆ, ಇಷ್ಟೆಲ್ಲಾ ರಕ್ತಪಾತ ನಡೆದರೂ ಆ ಪಾಪಿ ಹೆಣ್ಣು ಮಾತ್ರ ಅದೇ ಕೋಣೆಯಲ್ಲಿ, ಏನೂ ತಿಳಿಯದವಳಂತೆ ಬೆಡ್ ಮೇಲೆ ಆರಾಮಾಗಿ ಕುಳಿತು ಮೊಬೈಲ್ ನೋಡುತ್ತಿದ್ದಳು.!
ಒಮ್ಮೆ ಕಣ್ಣು ಮುಚ್ಚಿ ಯೋಚಿಸಿ ನೋಡಿ…
ಹೆತ್ತ ಮಗ ರಕ್ತದ ಮಡುವಿನಲ್ಲಿ ನರಳಾಡುತ್ತಿದ್ದರೆ, ಕಟ್ಟಿಕೊಂಡ ಗಂಡ ಹೆಣವಾಗಿ ಬಿದ್ದಿದ್ದರೆ, ಯಾವೊಬ್ಬ ತಾಯಿಗೆ ತಣ್ಣಗೆ ಕೂತು ಮೊಬೈಲ್ ನೋಡಲು ಮನಸ್ಸು ಬರುತ್ತದೆ? ಯಾವ ಹಂತದ ಕ್ರೌರ್ಯವಿದು? ಯಾವ ಮಟ್ಟದ ವಿಕೃತ ಮನಸ್ಸಿದು?
ನೆರೆಹೊರೆಯವರು ಹಾಗೂ ಸ್ಥಳಕ್ಕೆ ಬಂದ ಪೊಲೀಸರು ಆಕೆಯ ಈ ದೆವ್ವದಂತಹ ನಿರ್ಲಕ್ಷ್ಯ, ಆತಂಕವೇ ಇಲ್ಲದ ಆ ಮುಖ ನೋಡಿ ದಿಗ್ಭ್ರಮೆಗೊಂಡಿದ್ದಾರೆ. ಹೆತ್ತ ಕರುಳಿಗೇ ಚೂರಿ ಹಾಕಿ, ರಕ್ತ ಹರಿಯುತ್ತಿದ್ದರೆ ಮೊಬೈಲ್ನಲ್ಲಿ ಮುಳುಗಿದ್ದ ಆಕೆಯ ವಿಕೃತಿಯನ್ನು ಕಂಡು ಇಡೀ ಸಮಾಜವೇ ಆಕ್ರೋಶದಿಂದ ಕುದಿಯುತ್ತಿದೆ. ಇಂತಹ ರಕ್ಕಸ ಪ್ರವೃತ್ತಿಗೆ ಕಾನೂನು ಕಠಿಣಾತಿ ಕಠಿಣ ಶಿಕ್ಷೆ ವಿಧಿಸಲೇಬೇಕು!
