ತಡಸಿನಕೊಪ್ಪದ ಬಳಿ “ಗುಂಡಿನ ದಾಳಿ ಪ್ರಕರಣ”- ಹೊರ ರಾಜ್ಯದಲ್ಲಿ ಹುಬ್ಬಳ್ಳಿ ಪೊಲೀಸರ ಬಲೆಗೆ ಬಿದ್ದ “ಸುಂದರಪೌಲ್ ಅರೆಸ್ಟ್”..!?
ಹುಬ್ಬಳ್ಳಿ: ತಡಸಿನಕೊಪ್ಪದ ಬಳಿ ನಡೆದ ಜಮೀನು ವ್ಯಾಜ್ಯದ ಪ್ರಕರಣದಲ್ಲಿ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದ ಪ್ರಮುಖ ಆರೋಪಿ ಸುಂದರಪೌಲ್ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆಂದು ಖಚಿತ ಮೂಲಗಳಿಂದ ತಿಳಿದು ಬಂದಿದೆ.
ಧಾರವಾಡದ ತಡಸಿನಕೊಪ್ಪದ ಬಳಿಯ ಜಮೀನು ಖಬ್ಜಾ ಪಡೆಯಲು ಜೆಸಿಬಿ ಸಮೇತ ಹೋದ ಸಮಯದಲ್ಲಿ ರೈತರ ಜೊತೆ ಗಲಾಟೆ ನಡೆದಿತ್ತು. ಈ ಸಮಯದಲ್ಲಿ ಸುಂದರಪೌಲ್ ಗುಂಡು ಹಾರಿಸಿದ್ದ. ಪ್ರಕರಣದ ವೀಡಿಯೋ ವೈರಲ್ ಆಗಿದ್ದವು.
ಘಟನೆಯ ನಂತರ ಹುಬ್ಬಳ್ಳಿ ಧಾರವಾಡ ಹೌಹಾರಿತ್ತು. ಇಂತಹ ಘಟನೆ ಇಲ್ಲಿ ನಡೆದಿದ್ದು, ಬಹುತೇಕರನ್ನ ಆಕ್ರೋಶಕ್ಕೆ ಎಡೆ ಮಾಡಿತ್ತು. ಅಷ್ಟೇ ಅಲ್ಲ, ಕೇಂದ್ರ ಸಚಿವರು ಈ ವಿಷಯದ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
ಘಟನೆಯಲ್ಲಿ ಓರ್ವನಿಗೆ ಗಾಯವಾಗಿತ್ತು. ಅಂದಿನಿಂದ ಪರಾರಿಯಾಗಿದ್ದ ಸುಂದರಪೌಲ್ನನ್ನ ಹುಡುಕಲು ವಿಶೇಷ ತಂಡವನ್ನ ಪೊಲೀಸ್ ಕಮೀಷನರ್ ರಚನೆ ಮಾಡಿದ್ದರು.
ವಿಶೇಷ ತಂಡದಲ್ಲಿ ಪಿಎಸ್ಐ ಸಾತಣ್ಣನವರ, ಶ್ರೀಮಂತ ಮತ್ತು ಟೀಂ ಹೊರ ರಾಜ್ಯದಲ್ಲಿ ಬಂಧನ ಮಾಡಿ, ನಗರಕ್ಕೆ ತಂದಿದ್ದಾರೆಂದು ಗೊತ್ತಾಗಿದ್ದು, ಪೊಲೀಸ್ ಆಯುಕ್ತರ ನಿರಂತರ ಮಾಹಿತಿ ಕ್ರೋಡೀಕರಣ ಆರೋಪಿಯ ಬಂಧನಕ್ಕೆ ಸಹಕಾರಿಯಾಗಿದೆ.
