Karnataka Voice

Latest Kannada News

Exclusive ಬ್ಯಾಹಟ್ಟಿಯಲ್ಲಿ ಮೊಹರಂ ಸಮಯದಲ್ಲೇ “ಕತ್ತಲ್ ರಾತ್ರಿ ಕೊಲೆ”- ಫಕ್ಕೀರಪ್ಪನ ಮುಗಿಸಿದ ಪ್ರಕಾಶ….

Spread the love

ಹುಬ್ಬಳ್ಳಿ: ತನ್ನ ಮಡದಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆಂಬ ಕಾರಣಕ್ಕೆ ಎರಡು ಮಕ್ಕಳ ವ್ಯಕ್ತಿಯನ್ನ ಬರ್ಭರವಾಗಿ ಹತ್ಯೆ ಮಾಡಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದ ಶಾಂತಿನಗರ ಪ್ಲಾಟ್‌ನಲ್ಲಿ ನಡೆದಿದೆ.

ಹತ್ಯೆಯಾದ ವ್ಯಕ್ತಿಯನ್ನ ಫಕ್ಕೀರಪ್ಪ ಅಲಿಯಾಸ್ ಬಸು ಅಕ್ಕಿವಳ್ಳಿ ಎಂದು ಗುರುತಿಸಲಾಗಿದ್ದು, ಅದೇ ಪ್ರದೇಶದ ಪ್ರಕಾಶ ಕರಶೆಟ್ಟಿ ಎಂಬಾತನೇ ಕೊಲೆ ಮಾಡಿರುವ ಆರೋಪಿ ಎನ್ನಲಾಗಿದೆ.

ಹಲವು ದಿನಗಳಿಂದ ಪ್ರಕಾಶನ ಮಡದಿಯ ಜೊತೆ ಬಸು ಅನೈತಿಕ ಸಂಬಂಧ ಹೊಂದಿದ್ದನೆಂಬ ಕಾರಣಕ್ಕೆ ರಾಜೀ ಪಂಚಾಯತಿ ನಡೆದಿತ್ತಂತೆ. ಇದಾದ ನಂತರವೂ ಬಸುನ ಆಟ ಮುಂದುವರೆದ ಪರಿಣಾಮ, ಹೀಗೆ ಮಾಡಿದ್ದಾನೆಂದು ಹೇಳಲಾಗಿದೆ.

ಮಾಹಿತಿ ತಿಳಿಯುತ್ತಿದ್ದ ಹಾಗೇ ಸ್ಥಳಕ್ಕೆ ಧಾವಿಸಿದ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಇನ್ಸಪೆಕ್ಟರ್ ಮುರಗೇಶ ಚೆನ್ನಣ್ಣನವರ ಆಗಮಿಸಿ, ಆರೋಪಿಯನ್ನ ವಶಕ್ಕೆ ಪಡೆದಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed