ಧಾರವಾಡ: ಪ್ರತ್ಯೇಕ ಮಹಾನಗರ ಪಾಲಿಕೆ ಫಿಕ್ಸ್… ನಾವೂ ಒಪ್ಪಿಕೊಂಡಿದ್ದೇವೆಂದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ…
ಹುಬ್ಬಳ್ಳಿ: ಧಾರವಾಡ ಮಹಾನಗರ ಪಾಲಿಕೆಯನ್ನ ಪ್ರತ್ಯೇಕ ಮಾಡಲು ನಾವೂ ಕೂಡ ಒಪ್ಪಿಕೊಂಡಿದ್ದೇವೆ ಎಂದು ಕೇಂದ್ರ ಸಚಿವ ಸಚಿವ ಪ್ರಲ್ಹಾದ ಜೋಶಿ ಅವರು ಸ್ಪಷ್ಟವಾಗಿ ಹೇಳಿದ್ದಾರೆ.
ಧಾರವಾಡ ಪ್ರತ್ಯೇಕ ಮಾಡುವ ಸಂಬಂಧಿಸಿದಂತೆ ಭಾವನೆಗಳ ಮುಂದೆ ಕನ್ವಿನ್ಸ್ ಮಾಡೋಕೆ ಆಗಲ್ಲ. ಹಾಗಾಗಿ, ನಾವೂ ಕೂಡಾ ರಾಜ್ಯಪಾಲರನ್ನ ಭೇಟಿ ಮಾಡಿ, ಮಾಹಿತಿ ಪಡೆದು ಕಳಿಸಲು ಮನವಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಧಾರವಾಡ ಮಹಾನಗರ ಪಾಲಿಕೆ ಹೋರಾಟದಲ್ಲಿ ಕಾಂಗ್ರೆಸ್ ತುಚ್ಯವಾಗಿ ನಡೆದುಕೊಂಡಿದೆ. ಪಾಲಿಕೆಗೆ 350 ಕೋಟಿ ರೂಪಾಯಿ ಬರಬೇಕಿದೆ. ಮೊದಲು ಅದನ್ನ ತರಿಸಿಕೊಳ್ಳಿ ಎಂದು ಚಾಟಿ ನೀಡಿದ್ದಾರೆ.
