Posts Slider

Karnataka Voice

Latest Kannada News

Big Exclusive: 1.15ಕೋಟಿ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದ ಧಾರವಾಡ, ಹಾವೇರಿ ಪೊಲೀಸರು- SP ಗುಂಜನ ಆರ್ಯ ಟೀಂಗೆ ಶಹಬ್ಬಾಸ್‌ಗಿರಿ…!!!!

Spread the love

ಧಾರವಾಡ–ಹಾವೇರಿ ಪೊಲೀಸರ ಜಂಟಿ ಕಾರ್ಯಾಚರಣೆ: ₹1.15 ಕೋಟಿ ಮೌಲ್ಯದ ಚಿನ್ನ, ಬೆಳ್ಳಿ ವಶ; ಇಬ್ಬರು ಅಂತರ ಜಿಲ್ಲಾ ಕಳ್ಳರ ಬಂಧನ

ಹುಬ್ಬಳ್ಳಿ: ಧಾರವಾಡ ಹಾಗೂ ಹಾವೇರಿ ಜಿಲ್ಲಾ ಪೊಲೀಸರು ಜಂಟಿಯಾಗಿ ನಡೆಸಿದ ಸಿನಿಮೀಯ ಮಾದರಿಯ ಕಾರ್ಯಾಚರಣೆಯಲ್ಲಿ ಅಂತರ ಜಿಲ್ಲಾ ಕಳ್ಳರ ಗ್ಯಾಂಗ್ ಒಂದನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಒಟ್ಟು ₹1 ಕೋಟಿ 15 ಲಕ್ಷ ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

​ಲಕ್ಷ್ಮೇಶ್ವರ ತಾಲ್ಲೂಕಿನ ಬಾಳೇಹೊಸೂರಿನ ಶಿವರಾಜ ಹನುಮಂತಪ್ಪ ಮೋಡಿಕೇರ ಹಾಗೂ ಸಿಂಧನೂರು ತಾಲ್ಲೂಕಿನ ಅಂಬಾಪುರದ ಅಶೋಕ ಅಲಿಯಾಸ್ ರಮೇಶ್ ಶಿವಪ್ಪ ಕೊಂಜೆಕುರವರ್ ಬಂಧಿತ ಆರೋಪಿಗಳು. ಈ ಜಾಲದಲ್ಲಿದ್ದ ಇನ್ನುಳಿದ ನಾಲ್ವರು ಆರೋಪಿಗಳು ಸದ್ಯ ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

​ಕಳೆದ ಏಪ್ರಿಲ್ ತಿಂಗಳಲ್ಲಿ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಕಿರೇಸೂರ ಗ್ರಾಮದಲ್ಲಿ ನಡೆದಿದ್ದ ಮನೆ ಕಳ್ಳತನ ಹಾಗೂ ಕೇವಲ ಎರಡು ದಿನಗಳ ಹಿಂದೆ ಹಾವೇರಿ ಜಿಲ್ಲೆಯ ಹಾನಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಬಂಗಾರದ ಅಂಗಡಿಯ ಕಳ್ಳತನ ಪ್ರಕರಣಗಳನ್ನು ಭೇದಿಸಲು ಉಭಯ ಜಿಲ್ಲೆಗಳ ಪೊಲೀಸರು ವಿಶೇಷ ಜಂಟಿ ತಂಡವನ್ನು ರಚಿಸಿದ್ದರು. ಬಂಧಿತರಿಂದ 310 ಗ್ರಾಂ ಬಂಗಾರದ ಆಭರಣಗಳು, 26 ಕೆ.ಜಿ ಬೆಳ್ಳಿಯ ಆಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ್ದ (ತೆಲಂಗಾಣದಲ್ಲಿ ಕಳವು ಮಾಡಲಾಗಿದ್ದ) ಒಂದು ಬುಲೆರೋ ವಾಹನವನ್ನು ಜಪ್ತು ಮಾಡಲಾಗಿದೆ.

ಧಾರವಾಡ ಮತ್ತು ಹಾವೇರಿ ಜಿಲ್ಲಾ ಪೊಲೀಸ್ ಅಧೀಕ್ಷಕರ ನೇರ ಮಾರ್ಗದರ್ಶನದಲ್ಲಿ ಈ ಕೆಳಗಿನ ತಂಡ ಕಾರ್ಯನಿರ್ವಹಿಸಿದೆ

  • ಅಧಿಕಾರಿಗಳ ತಂಡ: ಸೈಬರ್ ಕ್ರೈಂ ಡಿವೈಎಸ್‌ಪಿ ಶಿವಾನಂದ ಕಟಗಿ, ಧಾರವಾಡ ಗ್ರಾಮೀಣ ಉಪವಿಭಾಗದ ಡಿವೈಎಸ್‌ಪಿ ವಿನೋದ ಮುಕ್ತೇದಾರ, ಹುಬ್ಬಳ್ಳಿ ಗ್ರಾಮೀಣ ಇನ್ಸ್‌ಪೆಕ್ಟರ್ ಮುರುಗೇಶ ಚನ್ನಣ್ಣವರ, ನವಲಗುಂದ ಸಿಪಿಐ ರವಿ ಕಪ್ಪತ್ತನವರ, ಹಾನಗಲ್ ಸಿಪಿಐ ಬಸವರಾಜ ಹಳಬಣ್ಣವರ ಹಾಗೂ ಹುಬ್ಬಳ್ಳಿ ಗ್ರಾಮೀಣ ಪಿಎಸ್‌ಐ ಇಮ್ರಾನ್ ಪಠಾಣ.
  • ಹಾವೇರಿ ಜಿಲ್ಲೆಯ ಪಿಎಸ್‌ಐಗಳು: ಶ್ರೀ ಸಂಪತ್, ಶ್ರೀ ಶರಣಪ್ಪ, ಶ್ರೀ ಮಂಜುನಾಥ ಹಾಗೂ ಶ್ರೀ ಯಲ್ಲಪ್ಪ.
  • ಹುಬ್ಬಳ್ಳಿ ಗ್ರಾಮೀಣ ಅಪರಾಧ ದಳ: ಎನ್. ಎಮ್. ಹೊನ್ನಪ್ಪನವರ (ಎಎಸ್‌ಐ), ಸಿಬ್ಬಂದಿಯಾದ ಎಚ್. ಬಿ. ಬಹೋಳಿ, ಅಬ್ದುಲ್ ಕಾತರ, ಚನ್ನಪ್ಪ ಬಳ್ಳೊಳ್ಳಿ, ಮಾಂತೇಶ ಮದ್ದೀನ.
  • ನವಲಗುಂದ ಠಾಣೆ ಸಿಬ್ಬಂದಿ: ಮುತ್ತಪ್ಪ ಭಜಂತ್ರಿ, ಸದಾಶಿವ ಮುಖ್ಯೂರ, ಶ್ರೀಧರ ಕಡಕೋಳ, ಎಸ್. ಬಿ. ಕಳ್ಳಮನಿ, ಗೊಳಪ್ಪ ಜಗಲಿ.
  • ತಾಂತ್ರಿಕ ಸಿಬ್ಬಂದಿ: ವಿಠ್ಠಲ ಡಿಂಗನವರ.

​ಅತ್ಯಂತ ಚುರುಕಾಗಿ ಕಾರ್ಯನಿರ್ವಹಿಸಿ, ಜಂಟಿ ಕಳ್ಳತನ ಪ್ರಕರಣಗಳನ್ನು ಸಿನಿಮೀಯ ಶೈಲಿಯಲ್ಲಿ ಭೇದಿಸಿದ ಇಡೀ ತಂಡದ ಕಾರ್ಯವನ್ನು ಉನ್ನತ ಅಧಿಕಾರಿಗಳು ಮುಕ್ತಕಂಠದಿಂದ ಶ್ಲಾಘಿಸಿದ್ದು, ವಿಶೇಷ ಬಹುಮಾನವನ್ನು ಘೋಷಣೆ ಮಾಡಿದ್ದಾರೆ.


Spread the love

Leave a Reply

Your email address will not be published. Required fields are marked *